Advertisement

ಹಿಂದುತ್ವ ಬಿಟ್ಟರೆ ಅನಂತಗೇನು ಗೊತ್ತು? 

02:05 AM Mar 14, 2019 | |

ಶಿರಸಿ: ಐದು ಬಾರಿ ಗೆದ್ದು ಕೇಂದ್ರ ಸಚಿವರೂ ಆದ ಅನಂತಕುಮಾರ ಹೆಗಡೆ ಜಿಲ್ಲೆಗೆ ಕೊಟ್ಟ ಕೊಡುಗೆ ಏನು? ಮೋದಿ ಹೆಸರು ಹೇಳ್ಳೋದು ಬಿಟ್ಟು ಬೇರೇನೂ ಸಾಧನೆಯಿಲ್ಲ ಎಂದು ರಾಜ್ಯ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಆರೋಪಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇವಲ ಹಿಂದುತ್ವ ಹಾಗೂ ಧರ್ಮದ ವಿರುದ್ಧ ಮಾತನಾಡುತ್ತಾರೆ. ನಾವೂ ಹಿಂದೂಗಳೇ. ಯಾವ ಧರ್ಮದ ವಿರುದಟಛಿ ನಾವಲ್ಲ. ಆದರೆ, ಐದು ಬಾರಿ ಆರಿಸಿ ಬಂದ ಅನಂತ ಏನು ಕೊಟ್ಟಿದ್ದಾರೆ. ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ, ರೈಲ್ವೆಯ ವಿಚಾರದಲ್ಲಿ ಎಲ್ಲಿ ಭಾಗವಹಿಸಿದ್ದಾರೆ, ರಾಹುಲ್‌ ಗಾಂಧಿ  ಬಗ್ಗೆಯೂ ಕೀಳುಮಟ್ಟದ ಮಾತುಗಳನ್ನು ಆಡಿದ್ದಾರೆ. ಜವಾಬ್ದಾರಿಯುತವಾದ ಸಚಿವರು
ಇಂತಹ ಹೇಳಿಕೆ ನೀಡಬಾರದು. ಜನಪ್ರಿಯತೆ ತರುವ ಮಾತುಗಳಿಂದ ಸಾಧನೆ ಮಾಡಿಕೊಳ್ಳಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next