Advertisement

5th T20I ; ಭಾರತಕ್ಕೆ ಸೋಲುಣಿಸಿ ಸರಣಿ ಜಯಿಸಿದ ವೆಸ್ಟ್ ಇಂಡೀಸ್

12:52 AM Aug 14, 2023 | Team Udayavani |

ಲಾಡರ್‌ಹಿಲ್‌(ಫ್ಲೋರಿಡಾ): ಐದು ಪಂದ್ಯಗಳ ಟಿ 20 ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಸೋಲುಣಿಸಿದ ವೆಸ್ಟ್ ಇಂಡೀಸ್ 3-2 ರಿಂದ ಸರಣಿ ಜಯಿಸಿದೆ.

Advertisement

ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 165 ರನ್‌ ಗಳ ಸಾಧಾರಣ ಮೊತ್ತ ಕಲೆ ಹಾಕಿತು. ಆಟಕ್ಕೆ ಮಳೆ ಅಡ್ಡಿಯ ನಡುವೆಯೂ 166 ರನ್‌ಗಳ ಗುರಿ ಬೆನ್ನಟ್ಟಿದ ವಿಂಡೀಸ್‌ ಬ್ರಾಂಡನ್ ಕಿಂಗ್ ಅವರ ಅತ್ಯಮೋಘ ಆಟದಿಂದ ಭರ್ಜರಿ ಜಯ ಒಲಿಸಿಕೊಂಡಿತು. 18 ಓವರ್ ಗಳಲ್ಲೇ 2 ವಿಕೆಟ್ ನಷ್ಟಕ್ಕೆ 171 ರನ್ ಗಳಿಸುವ ಮೂಲಕ ಸುಲಭ ಜಯ ತನ್ನದಾಗಿಸಿಕೊಂಡಿತು.

ಬ್ರಾಂಡನ್ ಕಿಂಗ್ ಔಟಾಗದೆ 85 ರನ್ ಚಚ್ಚಿದರು.55 ಎಸೆತಗಳಲ್ಲಿ5 ಬೌಂಡರಿ ಮತ್ತು 6ಆಕರ್ಷಕ ಸಿಕ್ಸರ್ ಸಿಡಿಸಿದರು. ಕಿಂಗ್ ಗೆ ಸಾಥ್ ನೀಡಿದ ನಿಕೋಲಸ್ ಪೂರನ್ 47 ರನ್ ಗಳಿಸಿ ಔಟಾದರು. ಕೈಲ್ ಮೇಯರ್ಸ್ 10, ಶಾಯ್ ಹೋಪ್ ಔಟಾಗದೆ 22 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಾಲ್ಕು ವಿಕೆಟ್ ಕಿತ್ತ ರೊಮಾರಿಯೋ ಶೆಫರ್ಡ್ ಭಾಗಿಯಾದರು. ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ನಿಕೋಲಸ್ ಪೂರನ್ ಭಾಜನರಾದರು.

ಈ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅರ್ಧಶತಕ ಗಳಿಸಿದ್ದು ವಿಶೇಷ.ರವಿವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಹಾರ್ದಿಕ್‌ ಪಾಂಡ್ಯ, ನಿರ್ಧಾರ ಹಾದಿತಪ್ಪಿತು. ಆರಂಭಿಕ ಆಟಗಾರರಿಬ್ಬರೂ 17 ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್‌ ಸೇರಿದ್ದರು. ವಿಶೇಷವೆಂದರೆ, ಇವರಿಬ್ಬರೂ ಶನಿವಾರ ನಡೆದ ಪಂದ್ಯದಲ್ಲಿ ವಿಂಡೀಸ್‌ ಬೌಲರ್‌ಗಳನ್ನು ಧೂಳೀಪಟ ಮಾಡಿದ್ದರು.

Advertisement

ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 4 ಎಸೆತಗಳಲ್ಲಿ 5 ಮತ್ತು ಶುಭಮನ್‌ ಗಿಲ್‌ 9 ಎಸೆತಗಳಲ್ಲಿ 9 ರನ್‌ ಗಳಿಸಿ ಔಟಾದರು. ಇವರಿಬ್ಬರೂ ಅಖೀಲ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ ಒನ್‌ಡೌನ್‌ ಸೂರ್ಯಕುಮಾರ್‌ ಮತ್ತು ತಿಲಕ್‌ ವರ್ಮ ಒಂದಷ್ಟು ಹೊತ್ತು ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಿದರು. ಹೊಡಿಬಡಿ ಆಟಗಾರ ತಿಲಕ್‌ ವರ್ಮ 18 ಎಸೆತಗಳಲ್ಲಿ 2 ಸಿಕ್ಸ್‌, 3 ಬೌಂಡರಿಗಳ ನೆರವಿನಿಂದ 27 ರನ್‌ ಗಳಿಸಿದರು. ತಿಲಕ್‌ ವರ್ಮ ಕ್ರೀಸ್‌ನಲ್ಲಿ ಇದ್ದಷ್ಟು ಹೊತ್ತು ಮೊತ್ತ ಜೋರಾಗಿ ಏರುತ್ತಲೇ ಇತ್ತು.

ತಿಲಕ್‌ ವರ್ಮ ಔಟಾದ ಮೇಲೆ ಬಂದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ 13 ರನ್‌ ಗಳಿಸಲಷ್ಟೇ ಶಕ್ತವಾದರು. ಈ ಮೂಲಕ ಮತ್ತೂಮ್ಮೆ ವಿಫ‌ಲವಾದರು. ಹಾರ್ದಿಕ್‌ ಪಾಂಡ್ಯ 14 ರನ್‌ ಗಳಿಸಿದರು. ಅಕ್ಷರ್‌ ಪಟೇಲ್‌ 13 ರನ್‌ ಗಳಿಸಿ ಔಟಾದರು. ಅರ್ಷದೀಪ್‌ ಸಿಂಗ್‌ 8, ಕುಲದೀಪ್‌ ಯಾದವ್‌ ಶೂನ್ಯಕ್ಕೆ ಔಟಾದರು. ಸೂರ್ಯಕುಮಾರ್‌ ಯಾದವ್‌ 45 ಎಸೆತಗಳಲ್ಲಿ 61 ರನ್‌ ಗಳಿಸಿದರು. ಇದರಲ್ಲಿ 3 ಸಿಕ್ಸ್‌, 4 ಫೋರ್‌ಗಳಿವೆ. ಇದು ತಂಡದಲ್ಲಿಯೇ ಆಟಗಾರನೋರ್ವ ಗಳಿಸಿದ ಅತ್ಯಧಿಕ ರನ್‌.

ವೆಸ್ಟ್‌ ಇಂಡೀಸ್‌ ಪರ ಶೆಫ‌ರ್ಡ್‌ 31 ರನ್‌ ನೀಡಿ 4 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನ್ನಿಸಿದರು. ಹಾಗೆಯೇ, ಅಖೀಲ್‌ 24ಕ್ಕೆ 2, ಹೋಲ್ಡರ್‌ 36 ರನ್‌ಗೆ 2 ವಿಕೆಟ್‌ ಗಳಿಸಿದರು. ಆಟಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಮೊದಲಾರ್ಧದ ಆಟ ವಿಳಂಬವಾಗಿ ಕೊನೆಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next