Advertisement

ಬಿಜೆಪಿಗೆ ಬಂದರೆ ಸ್ವಾಗತ: ಡಾ|ಕೋರೆ

07:00 AM Sep 13, 2018 | Team Udayavani |

ಬೆಳಗಾವಿ: “ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ಸೇರಿದಂತೆ ಯಾರೇ ಬಿಜೆಪಿಗೆ ಬಂದರೂ ಸ್ವಾಗತ. ರಾಜಕೀಯವಾಗಿ ಸದ್ಯ ಜಾರಕಿಹೊಳಿ ಸಹೋದರರು ನನ್ನ ಸಂಪರ್ಕದಲ್ಲಿ ಇಲ್ಲ’ ಎಂದು ರಾಜ್ಯಸಭಾ ಸದಸ್ಯ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ, ಡಾ| ಪ್ರಭಾಕರ ಕೋರೆ ತಿಳಿಸಿದ್ದಾರೆ.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ರಾಜಕಾರಣದಲ್ಲಿ ಒಗ್ಗಟ್ಟಿಲ್ಲ. ವೈಯಕ್ತಿಕವಾಗಿ ಎಲ್ಲರೂ ಪ್ರಬಲರಾಗಿದ್ದರೂ ಒಗ್ಗಟ್ಟು ಇಲ್ಲದೆ ಇಲ್ಲಿಯವರು ಹಿಂದುಳಿಯಲು ಕಾರಣವಾಗಿದೆ. ನಾವೆಲ್ಲರೂ ಗಟ್ಟಿಯಾದರೆ ಮುಂದಿನ ದಿನಗಳಲ್ಲಿ ಇಲ್ಲಿಯವರೇ ಮುಖ್ಯಮಂತ್ರಿ ಆಗಲಿದ್ದಾರೆ. ರಾಜ್ಯ ಸರಕಾರದ ಭವಿಷ್ಯ ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಅಡಗಿದೆ. ಆದರೆ, ಈವರೆಗೂ ಬೆಳಗಾವಿಯ ಒಬ್ಬರೂ ಮುಖ್ಯಮಂತ್ರಿ ಆಗದಿರುವುದು ನೋವಿನ ಸಂಗತಿ. ಈಗಿನ ಕಾಂಗ್ರೆಸ್ಸಿನಲ್ಲಿ ಮೂಲ ಕಾಂಗ್ರೆಸ್ಸಿಗರು ಯಾರೂ ಇಲ್ಲ. ಹೊರಗಡೆಯಿಂದ ಹೋದವರೇ ಹೆಚ್ಚಾಗಿ  ಉಳಿದುಕೊಂಡಿದ್ದಾರೆ. ಸಿದ್ದರಾಮಯ್ಯ ಕೂಡ ಹೊರಗಡೆಯಿಂದ ಹೋದವರೇ ಆಗಿದ್ದಾರೆ. ಇನ್ನುಳಿದವರ ಹೆಸರನ್ನು ನಾನು ಪ್ರಸ್ತಾಪಿಸಲು ಹೋಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next