Advertisement

ವಾರದಲ್ಲಿ ಸಮಗ್ರ ಮರಳು ನೀತಿ ಪ್ರಕಟ: ಪರಮೇಶ್ವರ್‌

12:40 AM Jan 12, 2019 | |

ಬೆಂಗಳೂರು: “ಇ- ಟೆಂಡರ್‌’ ವ್ಯವಸ್ಥೆ ಸೇರಿದಂತೆ ಇತರೆ ಅಂಶಗಳನ್ನು ಒಳಗೊಂಡ ಸಮಗ್ರ ಮರಳು ನೀತಿಯನ್ನು ವಾರದೊಳಗೆ ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು.

Advertisement

ಮರಳು ನೀತಿಯನ್ನು ಸಮಗ್ರವಾಗಿ ಜಾರಿಗೊಳಿಸುವ ಸಂಬಂಧ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಂಪುಟ ಉಪ ಸಮಿತಿ ಸಭೆ ಬಳಿಕ ಪ್ರತಿಕ್ರಿಯಿಸಿದ ಪರಮೇಶ್ವರ್‌, ಅನ್ಯ ರಾಜ್ಯಗಳಲ್ಲಿನ ವ್ಯವಸ್ಥೆಯ ಬಗ್ಗೆಯೂ ಈಗಾಗಲೇ ಅಧಿಕಾರಿಗಳ ತಂಡ ಪ್ರವಾಸ ಕೈಗೊಂಡು ವರದಿ ನೀಡಿದ್ದು, ಅವುಗಳನ್ನು ಪರಿಶೀಲಿಸಿ ಸೂಕ್ತವಾದ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು. “ಇ- ಟೆಂಡರ್‌’ ಸೇರಿದಂತೆ ಇತರೆ ಸುಧಾರಿತ ವ್ಯವಸ್ಥೆಯನ್ನು  ಮರಳು ನೀತಿಯಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಜಾರಿಯಲ್ಲಿದ್ದ ಪಂಚಾಯ್ತಿ ವತಿಯಿಂದ ಮರಳು ಬ್ಲಾಕ್‌ ಹಂಚಿಕೆ, ನಂತರ ಲೋಕೋಪಯೋಗಿ ಇಲಾಖೆ ವತಿಯಿಂದ ಮರಳು ಬ್ಲಾಕ್‌ ಹಂಚಿಕೆ ಇತರೆ ವ್ಯವಸ್ಥೆ ಬಗ್ಗೆಯೂ ಚರ್ಚಿಸಲಾಗಿದೆ. ಮರಳು ಬ್ಲಾಕ್‌ ಹಂಚಿಕೆಯನ್ನು ಯಾರ ಸುಪರ್ದಿಗೆ ವಹಿಸಬೇಕು ಎಂಬ ಬಗ್ಗೆಯೂ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

“ಎಂ- ಸ್ಯಾಂಡ್‌’ (ಮ್ಯಾನ್ಯುಫ್ಯಾಕ್ಚರ್‌x ಸ್ಯಾಂಡ್‌) ಅಗತ್ಯತೆ, ಆಮದು ಮರಳು, ಅದರ ಸಾಧಕ- ಬಾಧಕ ಇತರೆ ಅಂಶಗಳನ್ನು ಪರಿಶೀಲಿಸಿಯೇ ನೀತಿಯಲ್ಲಿ ಅಳವಡಿಸಲಾಗುವುದು. ಒಟ್ಟಾರೆ ರಾಜ್ಯದಲ್ಲಿ ಮರಳಿನ ಅಭಾವ ತಲೆದೋರದ ರೀತಿಯಲ್ಲಿ ಸಮಗ್ರ ಅಂಶಗಳನ್ನು ಒಳಗೊಂಡ ಮರಳು ನೀತಿಯನ್ನು ವಾರದಲ್ಲಿ ಅಂತಿಮಗೊಳಿಸಿ ಪ್ರಕಟಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next