ಕೋಲಾರ: ವಾರಾಂತ್ಯ ಕರ್ಫ್ಯೂ 2ನೇ ದಿನಯಶಸ್ವಿಯಾದರೂ, ಬೆಳಗಿನ ಖರೀದಿ ವೇಳೆಯಲ್ಲಿತರಕಾರಿ ಮಾರುಕಟ್ಟೆ, ದಿನಸಿ ಅಂಗಡಿಗಳ ಮುಂದೆ ಜನಸಾಮಾಜಿಕ ಅಂತರ ಮರೆತು ಖರೀದಿಯಲ್ಲಿ ತೊಡಗಿದ್ದದೃಶ್ಯ ಕಂಡು ಬಂತು.
ಕರ್ಫ್ಯೂ ನಡುವೆ ಭಾನುವಾರ ಬೆಳಗ್ಗೆ 6 ರಿಂದ 10ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶಕಲ್ಪಿಸಿದ್ದರ ಹಿನ್ನೆಲೆಯಲ್ಲಿ ನಗರದ ತರಕಾರಿ ಮಾರುಕಟ್ಟೆಯಲ್ಲೂ ಜನ ಖರೀದಿಗೆ ಮುಗಿಬಿದ್ದಿದ್ದು, ವಿವಿಧೆಡೆಅಂಗಡಿಗಳ ಮುಂದೆ ಸಾಮಾಜಿಕ ಅಂತರ ಮರೆತು ಅಗತ್ಯವಸ್ತುಗಳು, ಆಹಾರ ಪದಾರ್ಥಗಳನ್ನು ಕೊಳ್ಳಲುಮುಂದಾಗಿದ್ದರು.
ಕೆಲವು ವ್ಯಾಪಾರಿಗಳು ಕದ್ದುಮುಚ್ಚಿಮಾಂಸ ಮಾರಾಟದಲ್ಲಿ ತೊಡಗಿದ್ದರು. ಮಾಂಸ ಪ್ರಿಯರುಅವಕಾಶ ಸಿಕ್ಕ ಕೂಡಲೇ ಮುಗಿಬಿದ್ದು ಖರೀದಿಸಿದರು.ಕೆಲವು ಕಡೆ ದುಬಾರಿ ಬೆಲೆ ನೀಡಿಯೂ ಖರೀದಿ ನಡೆದಿದ್ದುಕಂಡು ಬಂತು. ನಗರಸಭೆ ಅಧಿಕಾರಿಗಳು ದಾಳಿ ನಡೆಸಿನಗರದ ಚಿಕನ್ ಮಾರುಕಟ್ಟೆ ಬಂದ್ ಮಾಡಿಸಿದರು. ಈಸಂದರ್ಭದಲ್ಲಿ ವ್ಯಾಪಾರಿಗಳು, ಅಧಿಕಾರಿಗಳ ನಡುವೆಮಾತಿನ ಚಕಮಕಿಯೂ ನಡೆಯಿತು. ಪೊಲೀಸರುಬಂದೊಡನೇ ಅಂಗಡಿ ಮುಚ್ಚಿ ಅಲ್ಲಿಂದ ಕಾಲ್ಕಿತ್ತರು.
ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತ: ಕೋಲಾರದಲ್ಲಿವಾರಾಂತ್ಯ ಕರ್ಫ್ಯೂ ಮೊದಲ ದಿನ ಕೆಲವು ಸಾರಿಗೆ ಸಂಸ್ಥೆಬಸ್ಗಳು ಓಡಾಟ ನಡೆಸಿದವಾದರೂ 2ನೇ ದಿನ ಪೂರ್ಣಸಂಚಾರ ಸ್ಥಗಿತಗೊಂಡಿತು.
Related Articles
ಭಾನುವಾರ ಬಸ್ಗಳುರಸ್ತೆಗಿಳಿಯಲಿಲ್ಲ, ನಿಲ್ದಾಣದñ ಜನರ ಸುಳಿವು ಕಾಣಲಿಲ್ಲ.ಶನಿವಾರ ಕರ್ಫ್ಯೂ ನಡುವೆ ಪ್ರಯಾಣಿಕರಿಲ್ಲದೇ ಖಾಲಿಬಸ್ಗಳು ಓಡಾಡಿದ ಹಿನ್ನೆಲೆಯಲ್ಲಿ ನÐ ತr ಪ್ಪಿಸಲು ಸಾರಿಗೆಸಂಸ್ಥೆ ಭಾನುವಾರ ಬಸ್ಗಳನ್ನು ರಸ್ತೆಗೆ ಇಳಿಸಲಿಲ್ಲ.
ಬೆಳಗ್ಗೆ 10 ಗಂಟೆಗೆ ಓಡಾಟಕ್ಕೆ ಬ್ರೇಕ್: ಬೆಳಗ್ಗೆ 10ಗಂಟೆವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶಕಲ್ಪಿಸಿದ್ದ ಪೊಲೀಸರು ನಂತರ ಪ್ರಮುಖ ರಸ್ತೆಳಲ್ಲಿಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದರು. ಈನಡುವೆ ರಸ್ತೆಗಿಳಿದ ಹಲವು ಬೈಕ್ಗಳನ್ನು ಸೀಜ್ ಮಾಡಿದಪೊಲೀಸರು, ಕೆಲವು ಕಡೆ ಲಾಠಿ ಬೀಸಿ ಎಚ್ಚರಿಕೆ ನೀಡಿಮನೆಗೆ ಕಳುಹಿಸಿದರು.ವಾರಾಂತ್ಯ ಕರ್ಫ್ಯೂಗೆ ಕೋಲಾರದಲ್ಲಿ ಸಂಪೂರ್ಣಬೆಂಬಲ ವ್ಯಕ್ತವಾಗಿದ್ದು, ಎಸ್ಪಿ ಕಾರ್ತಿಕ್ರೆಡ್ಡಿ ನೇತೃತ್ವದಲ್ಲಿಪೊಲೀಸರ ಬಿಗಿ ಬಂದೋಬಸ್ತ್ನಲ್ಲಿ ವಾರಾಂತ್ಯಭಾನುವಾರದ ಕರ್ಫ್ಯೂ ಸಂಪೂರ್ಣ ಯಶಸ್ವಿಯಾಗಿದೆ.
ಅಗತ್ಯ ಸೇವೆಗಳಿಗೆ ರಿಯಾಯ್ತಿ: ಆಸ್ಪತ್ರೆ, ಮೆಡಿಕಲ್ಸ್ಟೋರ್, ಕೋವಿಡ್ ಟೆಸ್ಟ್, ಲಸಿಕೆ ಹಾಕಿಸಿಕೊಳ್ಳಲುಹೋಗುವ ನಾಗರಿಕರಿಗೆ ಪೊಲೀಸರು ವಿನಾಯಿತಿನೀಡಿದರು. ಭಾನುವಾರವೂ ನಗರದ ಆಸ್ಪತ್ರೆಗಳಲ್ಲಿಕೋವಿಡ್ ಟೆಸ್ಟ್ ನಡೆಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ನೂಕುನುಗಲು ಕಂಡು ಬಂತು.