Advertisement

ಕಣ್ಣಲ್ಲಿ ರಕ್ತ ಸುರಿಸಿ ಎಚ್‌ಡಿಕೆ ಮುಖ್ಯಮಂತ್ರಿ ಮಾಡಿದೆವು

06:50 AM May 11, 2018 | Team Udayavani |

ಮದ್ದೂರು: ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವಾಗ ನಾವು ಕಣ್ಣಲ್ಲಿ ರಕ್ತ ಸುರಿಸಿದ್ದೇವೆ. ಪಕ್ಷ ಮತ್ತು ದೇವೇಗೌಡರು ಬೇಡ ಅಂದರೂ ಕುಮಾರಸ್ವಾಮಿಯನ್ನು ಸಿಎಂ ಮಾಡಿದೆವು ಎಂದು ಕಾಂಗ್ರೆಸ್  ಅಭ್ಯರ್ಥಿ ಎನ್‌.ಚೆಲುವರಾಯಸ್ವಾಮಿ ಹೇಳಿದರು.

Advertisement

ತಾಲೂಕಿನ ಕೊಪ್ಪದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿಗೂ ಆಪರೇಷನ್‌ ಆಗಿದೆ. ನನಗೂ ಆಪರೇಷನ್‌ ಆಗಿದೆ. ನಮ್ಮಪ್ಪ ಪ್ರಧಾನಿಯಲ್ಲ. ಸಾಮಾನ್ಯ ರೈತನ ಮಗ ನಾನು ಎಂದು ಕುಮಾರಸ್ವಾಮಿಗೆ
ಟಾಂಗ್‌ ನೀಡಿದರು. ವಿಧಾನಸೌಧದಲ್ಲಿ ಗೌಡರ ಫೋಟೋ ತೆಗೆದಿದ್ದರು.ಅದನ್ನು ಮತ್ತೆ ಹಾಕಿಸಲು ಅವರ ಮಕ್ಕಳು ಬಂದಿರಲಿಲ್ಲ. ಅದನ್ನು ಹಾಕಿಸಿದ್ದು ನಾನು. ಡಿ.ಕೆ.ಶಿವಕುಮಾರ್‌ ಬೆಂಬಲಿಗರು ತಿರುಗಿ ಬಿದ್ದಾಗ ಅವರನ್ನು ಸಮಾಧಾನಪಡಿಸಿದ್ದೂ ನಾನೇ. ಈಗ ನನ್ನನ್ನು ರಾಜಕೀಯವಾಗಿ ಮುಗಿಸಲು ಪಣ ತೊಟ್ಟಿರುವ ದೇವೇಗೌಡ, ಕ್ಷೇತ್ರದ ಎಲ್ಲಾ ಪಂಚಾಯಿತಿಗೂ ಹಣ ಕಳಿಸಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next