Advertisement

ಮೈತ್ರಿ ಸರಕಾರದ ಸಂಬಂಧ ಡೈವೋರ್ಸ್‌ ಹಂತಕ್ಕೆ ತಲುಪಿದೆ: ಡಿವಿಎಸ್‌ 

07:29 AM Jan 15, 2019 | |

ನೆಲಮಂಗಲ: 37 ಸ್ಥಾನ ಬಂದವರು ಅಧಿಕಾರ ಮಾಡುವಾಗ 104 ಸ್ಥಾನ ಬಂದಿರುವ ನಾವು ಅಧಿಕಾರ ಮಾಡಬಾರದೇ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರಶ್ನಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವು ಯಾವುದೇ ಶಾಸಕರನ್ನು ಸೆಳೆಯುತ್ತಿಲ್ಲ, ಹಾಗೆ ಹೇಳುವುದು ಸರಿಯಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಸ್ಥಿತಿ ಡೈವೋರ್ಸ್‌ ಹಂತಕ್ಕೆ ಬಂದು ನಿಂತಿದೆ. ರಾಜ್ಯದಲ್ಲಿ ರಾಜಕೀಯ ರದ್ಧಾಂತ ನಡೆಯುತ್ತಿದೆ. ನಮಗೂ ಬದಲಾವಣೆ ಮಾಡುವ ಜವಾಬ್ಧಾರಿ ಇದೆ ಎಂದರು. 

ನಮ್ಮ ಶಾಸಕರು ದೆಹಲಿಗೆ ರಾಷ್ಟ್ರೀಯ ಪರಿಷತ್‌ ಸಭೆಗಾಗಿ ತೆರಳಿದ್ದಾರೆ. ಅವರಿಗೆ ಲೋಕಸಭಾ ಚುನವಣೆಗಾಗಿ ತರಬೇತಿ ನೀಡಲಾಗುತ್ತಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next