Advertisement

ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ನಾವೇ ಒಪ್ಪಿಕೊಂಡಿದ್ದೇವೆ: ಆರಗ ಜ್ಞಾನೇಂದ್ರ

01:32 PM Apr 30, 2022 | Team Udayavani |

ಶಿವಮೊಗ್ಗ: ಪಿಎಸ್ಐ ನೇಮಕಾತಿ ಅಕ್ರಮ ಅಗಿದೆ ನಾವೇ ಒಪ್ಪಿಕೊಂಡಿದ್ದೆವೆ. ದಾಖಲೆ ಸಿಕ್ಕ ಎರಡು ಗಂಟೆಯಲ್ಲಿ ನಾನೇ ಸಿಒಡಿ ತನಿಖೆಗೆ ಆದೇಶ ಮಾಡಿದ್ದೆನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ಪರೀಕ್ಷೆ ಅಕ್ರಮದ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯುತ್ತಿದೆ. ಆರೋಪಿಗಳ ಬಂಧನ ಕೂಡ ಮಾಡಲಾಗಿದೆ. ಬೇರೆ ಬೇರೆ ರೀತಿಯಲ್ಲಿ ತಂತ್ರಜ್ಞಾನ ಬಳಸಿ, ಅಕ್ರಮ ಮಾಡಿದ್ದಾರೆ. ಮರುಪರೀಕ್ಷೆ ಮಾಡೋದು ಸರ್ಕಾರಕ್ಕೆ ಅನಿವಾರ್ಯ ಎಂದರು.

ನಾವು ನೋಟಿಫಿಕೇಶನ್ ರದ್ದು ಮಾಡಿಲ್ಲ. ಪರೀಕ್ಷೆಯನ್ನು ಮಾತ್ರ ರದ್ದು ಮಾಡಿದ್ದೇವೆ. ಪ್ರಾಮಾಣಿಕ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು. ಈ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಿ, ಮರುಪರೀಕ್ಷೆಗೆ ಸರ್ಕಾರ ಆದೇಶ ಮಾಡಿದೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ:ನಾಗಾಲ್ಯಾಂಡ್ ನಲ್ಲಿ ಕ್ಷಿಪ್ರ ಬದಲಾದ ರಾಜಕೀಯ ಲೆಕ್ಕಾಚಾರ:ಎನ್ ಪಿಎಫ್ ನ 21 ಶಾಸಕರು ಪಕ್ಷಾಂತರ

ಈಗಾಗಲೇ ಪರೀಕ್ಷೆಯಲ್ಲಿ ಫೇಲ್ ಆದವರಿಗೆ ಮತ್ತೊಂದು ಅವಕಾಶವಿದು. ಅಕ್ರಮ ಮಾಡಿದವರಿಗೆ ತಕ್ಕ ಪಾಠವಾಗಲಿದೆ. ದೈಹಿಕ ಪರೀಕ್ಷೆ ಇರುವುದಿಲ್ಲ. ಕೇವಲ ಲಿಖಿತ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಮುನ್ನಚ್ಚರಿಕೆ ಮತ್ತು ತಂತ್ರಜ್ಞಾನ ಬಳಸಿ ಪಿಎಸ್ಐ ಪರೀಕ್ಷೆ ನಡೆಸಲಾಗುವುದು. ಮರುಪರೀಕ್ಷ ವಿಚಾರವಾಗಿ ಯಾವುದೇ ಗೊಂದಲವಿಲ್ಲ ಎಂದರು.

Advertisement

ಅಕ್ರಮ ಮಾಡುವವರಿಗೆ ತಕ್ಕ ಪಾಠ ಆಗಬೇಕು. ಆ ನಿಟ್ಟಿನಲ್ಲಿ ಸಹ ಕಾನೂನು ತಿದ್ದುಪಡಿ ಮಾಡುತ್ತೇವೆ. ಕಷ್ಟಪಟ್ಟು ಓದಿದವರಿಗೆ ಅನುಕೂಲ ಆಗಬೇಕು.  ಹಣ ಕೊಟ್ಟು ಕೊಂಡು ಕೊಳ್ಳುವವರಿಗೆ ಅಲ್ಲ ಎಂದು ಗೃಹ ಸಚಿವರು ಹೇಳಿದರು.

ನನ್ನನ್ನು ಅರೆಸ್ಟ್ ಮಾಡಿ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಉತ್ತರಿಸಿದ ಗೃಹ ಸಚಿವರು, ಪ್ರಿಯಾಂಕ್ ಖರ್ಗೆ ಸಿಐಡಿ ನೋಟಿಸ್ ನೀಡಿದರು ಬಂದಿಲ್ಲ. ಅವರ ಬಳಿ ಸಾಕ್ಷಿಗಳಿದ್ದರೆ ಸಿಐಡಿಗೆ ನೀಡಲಿ. ಮಾಧ್ಯಮದವರ ಮುಂದೆ ಅಲ್ಲ. ಅದನ್ನು ಬಿಟ್ಪು ಕೇವಲ ಈ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುವುದು ಸರಿಯಲ್ಲ. ದಾಖಲೆಗಳನ್ನು ತನಿಖಾಧಿಕಾರಿಯ ಮುಂದೆ ಕೊಡದೇ ಪಲಾಯನ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯ ಲಾಭ ಬೇಕು. ಪ್ರಾಮಾಣಿಕ ತನಿಖೆ ಅವರಿಗೆ ಬೇಡವಾಗಿದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next