Advertisement

ಆಸ್ಪತ್ರೆಗೆ ಬರಲು ಸಾಧ್ಯವಾಗದವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತೇವೆ : ಅಶ್ವತ್ಥ್ ನಾರಾಯಣ್

02:43 PM May 08, 2021 | Team Udayavani |

ಬೆಂಗಳೂರು :  ರೆಮಿಡಿಸ್ವೇರ್ ಇಂಜೆಕ್ಷನ್ ಅಲಾಟ್ ಆಗಿತ್ತು, 70 ಸಾವಿರ ಡೋಸ್ ಬಾಕಿ ಇದೆ.  ಇನ್ನೂ ಬೇಡಿಕೆ ಹೆಚ್ಚಾಗಿದೆ. ಮುಂದಿನ 16 ನೇ ತಾರೀಖಿನ ವರೆಗೂ ಬೇಡಿಕೆ ಇದೆ.  ಪ್ರತಿ ದಿನ 37 ಸಾವಿರ ರೆಮಿಡಿಸ್ವೇರ್ ಡೋಸ್ ಇರುತ್ತೆ.  ಈ ಕೋಟಾಗಳನ್ನು ಬಳಸಿಕೊಳ್ಳಲಾಗುತ್ತದೆ.  ನಮಗೆ ಕೊಡದೆ ಇದ್ದರೆ ಆ ಕಂಪನಿಗಳಿಗೆ ನೋಟಿಸ್ ಕೊಡುತ್ತೇವೆ  ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಶನಿವಾರ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಸಮಾಜ , ದೇಶ, ವಿಶ್ವ ಕೋವಿಡ್ ಸಾಂಕ್ರಾಮಿಕ ರೋಗ ನಿವಾರಣೆ ಮಾಡುವ ಕಡೆ ಗಮನ ಕೊಡುತ್ತಿದೆ. ಎಲ್ಲಾ ರೀತಿಯ ಸೌಕರ್ಯ ಅವಶ್ಯಕತೆ ಇದೆ. ಬೇಡಿಕೆಗೆ ತಕ್ಕಂತೆ ಅವಶ್ಯಕತೆಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕೆಲಸ ಸಮರ್ಥವಾಗಿ ನಡೆಯುತ್ತಿದೆ. ಪ್ರತಿಯೊಬ್ಬ ಸೋಂಕಿತನಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ. ಮಾತ್ರೆ, ಔಷಧ, ಆಹಾರ ಎಲ್ಲವನ್ನು ನೀಡಲಾಗುತ್ತಿದೆ ಎಂದರು.

ರಾಜ್ಯದ ಎಲ್ಲಾ ಕಡೆ 250 ಕೇಂದ್ರಗಳನ್ನು ನಮ್ಮ ಪಕ್ಷದ ವತಿಯಿಂದ ಎಲ್ಲಾ ಕಡೆ ಮಾಡಲಾಗುತ್ತಿದೆ. ಮಾನವ ಸಂಪನ್ಮೂಲ ಕೂಡ ಇಲ್ಲಿ ಬಳಕೆ ಆಗುತ್ತಿದೆ. ಇದು ಶ್ಲಾಘನೀಯ. ಇದಕ್ಕೆ ವ್ಯವಸ್ಥೆ ಮಾಡುವುದಕ್ಕೆ ಆಕ್ಸಿಜನ್ ಬೇಡಿಕೆ ಹೆಚ್ಚು ಆಗುತ್ತಿದೆ. ಕೋವಿಡ್ ಗೆ 70 ಸಾವಿರ ಬೆಡ್ ನಿಗದಿಯಾಗಿದೆ. ಖಾಸಗಿಯಲ್ಲಿ 20 ಸಾವಿರ ಬೆಡ್ ಇದೆ. ಆಕ್ಸಿಜನ್ ಬೇಡಿಕೆ ಹೆಚ್ಚು ಇದೆ.  ಇವತ್ತು 950 ಮೆಟ್ರಿಕ್ ಟನ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ಹೆಚ್ಚು ಹೆಚ್ಚು ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. 1200 ಮೆಟ್ರಿಕ್ ಟನ್ ಕೇಂದ್ರ ಸರ್ಕಾರ ಕೊಡುವುದಿದೆ.  ಎಲ್ಲಾ  ಮೆಡಿಕಲ್ ಕಾಲೇಜು, ತಾಲ್ಲೂಕಿನ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಹೆಚ್ಚಿಗೆ ಮಾಡಲಾಗುತ್ತೆ.  ಆಕ್ಸಿಜನ್ ಬೆಡ್ ಕೂಡ ಹೆಚ್ಚು ಮಾಡುತ್ತಿದ್ದೇವೆ. ಇವುಗಳ ಬೇಡಿಕೆ ಕೂಡ ಹೆಚ್ಚು ಇದೆ.

ಪ್ರಾರಂಭ ಆರೋಗ್ಯ ಕೇಂದ್ರಗಳಿಗೆ ಯಾರು ಬರುವುದಕ್ಕೆ ಆಗಲ್ಲ ಅವರಿಗೆ ಮನೆಗೆ ಟ್ರೀಟ್ಮೆಂಟ್ ನೀಡುತ್ತೇವೆ. ಟ್ರಾಸ್ಟಿಕ್ ಆಸ್ಪತ್ರೆಗಳನ್ನು ಮಾಡುತ್ತಿದ್ದೇವೆ. ಡಿಸ್ಚಾರ್ಜ್ , ಅಡ್ಮಿಟ್ ಮಾಡಿಕೊಳ್ಳುವಾಗ ಸಮಯ ವ್ಯರ್ಥ ಆಗುತ್ತಿತ್ತು ಆರ್ ಟಿ ಪಿ ಸಿ ಆರ್ 1.50,000 ಸರ್ಕಾರದ ನೇತೃತ್ವದಲ್ಲಿ ಟೆಸ್ಟ್ ಆಗ್ತಿದೆ.  ರ್ಯಾಡ್ ಟೆಸ್ಟ್ ಗಳನ್ನು ಮುಂದೆ ಮಾಡುತ್ತಿದ್ದೇವೆ.  ಇದು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾಡುತ್ತೇವೆ ಎಂದರು.

Advertisement

24 ಗಂಟೆ ಒಳಗೆ ಈ ಆರ್ ಟಿ ಪಿ ಎಸ್ ರಿಪೋರ್ಟ್ ಕೊಡಬೇಕು. ಇದನ್ನು ಕೆಲವು ಗಂಟೆಗಳಲ್ಲಿ ಕೊಡುವ ಕೆಲಸ ಆಗ್ತಿದೆ.  ಕೋವಿಡ್ ಲಕ್ಷಣಗಳು ಮೀರಿ ಜೀವಕ್ಕೆ ಅಪಾಯ ಆಗುತ್ತಿದೆ.  ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುತ್ತಿದ್ದೇವೆ.  ರಾಜ್ಯದ ಎಲ್ಲಾ ಕಡೆ ಔಷಧ ಮಾತ್ರೆಗಳನ್ನು ಸಂಪೂರ್ಣವಾಗಿ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಎರಡು ದಿನಗಳಲ್ಲಿ ಅದನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತೇವೆ.

15 ಕೋಟಿ ಲಸಿಕೆಗಳನ್ನು ಈಗಾಗಲೇ ಕೊಟ್ಟಿದೆ. 1 ಕೋಟಿ ಲಸಿಕೆ ನಮ್ಮ ರಾಜ್ಯಕ್ಕೆ ಕೊಟ್ಟಿದೆ. ಅಂಕಿಅಂಶಗಳನ್ನು ನೋಡಿದಾಗ ನಮಗೆ ಕಚ್ಚಾ ಮೆಟಿರಿಯಲ್ ಬೇರೆ ಬೇರೆ ದೇಶದ ಜೊತೆಗೆ ಮಾತಾಡಿ ನಮಗೆ ಕೊಟ್ಟಿದ್ದಾರೆ.  ಎಲ್ಲಾ ವ್ಯಾಕ್ಸಿನ್ ಕೊಡಲು ಸರ್ಕಾರ ಆರ್ಥಿಕ ಸಹಾಯ ಮಾಡಿದೆ. ಜುಲೈ ತಿಂಗಳಿಗೆ ಹೆಚ್ಚು ಹೆಚ್ಚು ವ್ಯಾಕ್ಸಿನ್ ತಯಾರಿಗೆ ಮಾಡಲಾಗುತ್ತಿದೆ. 17 ರಿಂದ 18 ಕೋಟಿ ವ್ಯಾಕ್ಸಿನ್ ತಯಾರಿಕೆ ಆಗುತ್ತಿದೆ.  ನಮ್ಮ ದೇಶದಲ್ಲಿ ಅತಿ ಹೆಚ್ಚು ಜನ ಸಂಖ್ಯೆ ಇದೆ.  ಎಲ್ಲಾ ಸವಾಲುಗಳನ್ನು ಎದುರಿಸಲಾಗುತ್ತಿದೆ.

2000 ಕೋವಿಡ್ ಕೇರ್ ಸೆಂಟರ್ ಇವೆ ಅವೆಲ್ಲವೂ ಸ್ಟೆಪ್ ಡೌನ್ ಆಸ್ಪತ್ರೆಗಳು. ಸರ್ಕಾರ ಕೋವಿಡ್ ಕೇರ್ ಸೆಂಟರ್ ಗಳನ್ನು ಕೂಡ ಮಾಡಲಾಗಿದೆ.  ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಮಾಡಿ ರೋಗಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ.  ರೋಗಿಗಳು ನೇರ ಆಸ್ಪತ್ರೆಗಳು ಬರುವುದಕ್ಕೆ ಆಗಿಲ್ಲ ಅಂದ್ರೆ ಅವರಿಗೆ ನೇರ ಮನೆಗೆ ಹೋಗಿ ಟ್ರೀಟ್ಮೇಂಟ್ ಕೊಡುತ್ತೇವೆ.

ಖಾಸಗಿ ಆಸ್ಪತ್ರೆಗಳಿಗೆ ಕೂಡ ಆರ್ಥಿಕ ಸಹಾಯ ಮಾಡುತ್ತೇವೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ಉತ್ತಮ ಕಾರ್ಯ ನಿರ್ವಹಿಸುತ್ತಿವೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next