Advertisement

ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ನಾವು ಘೋಷಿಸಿಲ್ಲ: ಚಿದಂಬರಂ

06:00 AM Oct 23, 2018 | Team Udayavani |

ಚೆನ್ನೈ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಕಾಂಗ್ರೆಸ್‌ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ನಮ್ಮ ಆದ್ಯತೆ ಏನಿದ್ದರೂ ಬಿಜೆಪಿಯನ್ನು ಸೋಲಿಸುವುದು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ. “ನ್ಯೂಸ್‌ 18 ತಮಿಳು’ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನ ದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಹುಲ್‌ ಗಾಂಧಿ ಯವರನ್ನು ಪ್ರಧಾನಿ ಹುದ್ದೆಗೆ ಏರಿಸಬೇಕು ಎಂಬ ಬಗ್ಗೆ ನಾವು ಪ್ರತಿಪಾದಿಸಿಲ್ಲ. ನಮ್ಮ ಪಕ್ಷದವರೇ ಈ ಬಗ್ಗೆ ಮಾತನಾಡಿದ್ದಾಗ ವರಿಷ್ಠರು ಆ ರೀತಿ ಮಾತನಾಡದಂತೆ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ. 

Advertisement

ಪ್ರಬಲವಾಗಿರುವ ಮೈತ್ರಿಕೂಟ ರಚಿಸುವುದೇ ಕಾಂಗ್ರೆಸ್‌ನ ಆದ್ಯತೆ. ಪ್ರಧಾನಿ ಹುದ್ದೆಗೆ ಯಾರು ಎಂಬ ಬಗ್ಗೆ ಚುನಾವಣೆಯ ಬಳಿಕ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ ಚಿದಂಬರಂ. ಎರಡು ದಶಕಗಳ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳು ಹೊಂದಿರುವ ಮತ ಬ್ಯಾಂಕ್‌ಗೆ ಸೆಡ್ಡು ಹೊಡೆದಿವೆ. ಹೀಗಾ ಗಿಯೇ ಕಾಂಗ್ರೆಸ್‌ ಮತ್ತು ಬಿಜೆಪಿ ಹೊಂದಿರುವ ಮತ ಪ್ರಮಾಣ ಶೇ.50ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

16 ಜೆಡಿಯುಗೆ; 17 ಬಿಜೆಪಿಗೆ:
ಪಾಟ್ನಾ: ಬಿಹಾರದ 42 ಲೋಕಸಭಾ ಕ್ಷೇತ್ರಗಳ ಸ್ಥಾನ ಹಂಚಿಕೆ ಬಿಜೆಪಿ-ಜೆಡಿಯು ನಡುವೆ ಕೊನೆಗೂ ಮುಕ್ತಾಯವಾಗಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ 16 ಜೆಡಿಯುಗೆ, 17 ಬಿಜೆಪಿಗೆ, 5 ಎಲ್‌ಜೆಪಿಗೆ, 2 ಸ್ಥಾನ ಸಚಿವ ಉಪೇಂದ್ರ ಖುಶ್ವಾಹರಿಗೆ ನೀಡಲು ನಿರ್ಧರಿಸಲಾಗಿದೆ. 

ಪ್ರಿಯಾಂಕಾ ಪೋಸ್ಟರ್‌: ರಾಯ್‌ ಬರೇಲಿಯಲ್ಲಿ “ಪ್ರಿಯಾಂಕಾ ವಾದ್ರಾ ಕಾಣೆಯಾಗಿದ್ದಾರೆ’ ಎಂಬ ಪೋಸ್ಟರ್‌ ಗಳು ಸೋಮವಾರ ಕಾಣಿಸಿ ಕೊಂಡಿದೆ. 

ಧೋನಿ, ಗೌತಮ್‌ಗೆ ಬಿಜೆಪಿ ಟಿಕೆಟ್‌?
2019ರ ಲೋಕಸಭೆ ಚುನಾವಣೆಯಲ್ಲಿ ಕ್ರಿಕೆಟಿಗರಾದ ಎಂ.ಎಸ್‌.ಧೋನಿ ಮತ್ತು ಗೌತಮ್‌ ಗಂಭೀರ್‌ ಬಿಜೆಪಿ ಟಿಕೆಟ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿವೆ. ಜಾರ್ಖಂಡ್‌ನಿಂದ ಕಣಕ್ಕಿಳಿಯುವಂತೆ ಧೋನಿ ಜತೆ ಬಿಜೆಪಿ ಮಾತುಕತೆ ನಡೆಸುತ್ತಿದೆ ಹಾಗೂ ಗಂಭೀರ್‌ಗೆ ದೆಹಲಿ ಟಿಕೆಟ್‌ ನೀಡುವ ಸಾಧ್ಯತೆಯಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next