Advertisement

ಸಂವಿಧಾನ ಬದಲಾಯಿಸೋದಕ್ಕೇ ನಾವು ಬಂದಿರೋದು!

04:24 PM Dec 24, 2017 | Team Udayavani |

ಕೊಪ್ಪಳ : ‘ಜಾತ್ಯಾತೀತರ ರಕ್ತದ ಬಗ್ಗೆ ನನಗೆ ಅನುಮಾನವಿದೆ. ನಾವು ಸಂವಿಧಾನ ಬದಲಾಯಿಸಲೆಂದೇ ಬಂದಿರುವುದು’ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

Advertisement

ಕುಕನೂರಿನಲ್ಲಿ ನಡೆದ ಯುವ ಬ್ರಾಹ್ಮಣ ಸಭೆಯಲ್ಲಿ ಮಾತನಾಡಿದ ಸಚಿವ ಹೆಗಡೆ  ‘ನಾನು ಹಿಂದೂ, ನಾನು ಮುಸ್ಲಿಂ,ನಾನೊಬ್ಬ ಕ್ರೈಸ್ತ, ನಾನೊಬ್ಬ ಲಿಂಗಾಯತ ಎಂದರೆ ನನಗೆ ನಿಜಕ್ಕೂ ಖುಷಿ , ಅವರ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದರೆ ಈ ಜಾತ್ಯಾತೀತ ಎನ್ನುತ್ತಾರಲ್ಲ. ಅವರ ರಕ್ತದ ಬಗ್ಗೆ ನನಗೆ ಸಂಶಯ ಇದೆ. ಜಾತ್ಯಾತೀತರು ಅಪ್ಪ- ಅಮ್ಮನ ಪರಿಚಯ ಇಲ್ಲದವರು. ಸಂವಿಧಾನದಲ್ಲಿ ಹೇಳಿದೆ ಅನ್ನುತ್ತಾರೆ. ಹೌದು ಸ್ವಾಮಿ ನಾವೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡುವುದಕ್ಕೆ’ ಎಂದರು. 

ಇದೇ ವೇಳೆ ‘ಯಾರೋ ಒಬ್ಬ ಚಮಚಾ ಹೇಳಿದ್ದಕ್ಕೆ ನಾನು ಬದಲಾಗುವುದಿಲ್ಲ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next