Advertisement

ಚರ್ಚೆಗೆ ನಾವು ಸಿದ್ಧ: ಅನಂತ್‌ ಕುಮಾರ್‌

09:45 AM Mar 07, 2018 | Harsha Rao |

ಹೊಸದಿಲ್ಲಿ: ಪಿಎನ್‌ಬಿ ಹಗರಣ ಬಗ್ಗೆ ಸದನದ ಒಳಗೆ ಮತ್ತು ಹೊರಗೆ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ, ಆದರೆ, ವಿಪಕ್ಷಗಳೇ ತಪ್ಪಿಸಿಕೊಂಡು ಓಡಾಡುತ್ತಿವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕುಮಾರ್‌ ಆರೋಪಿಸಿದ್ದಾರೆ. ಸಂಸತ್‌ನಲ್ಲಿ ಗದ್ದಲ ಬಿಟ್ಟು ಬನ್ನಿ, ಚರ್ಚೆ ನಡೆಸೋಣ ಎಂದೂ ಅವರು ವಿಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್‌ ಮತ್ತು ಟಿಎಂಸಿ ಸದಸ್ಯರು ಪ್ರಧಾನಿ ಅವರ ಹೇಳಿಕೆಗಾಗಿ ಪಟ್ಟು ಹಿಡಿದ ವೇಳೆ ಅವರು, “ಪಿಎನ್‌ಬಿ ಹಗರಣ ಇಂದಿನದ್ದಲ್ಲ. ಅದು ಯುಪಿಎ ಕಾಲದಲ್ಲೇ ಶುರುವಾಗಿದ್ದು. ಹೀಗಾಗಿ ನಾವಂತೂ ಚರ್ಚೆಗೆ ಸಿದ್ಧರಿದ್ದೇವೆ’ ಎಂದರು. ಇನ್ನು,ರಾಜ್ಯ ಸಭೆಯಲ್ಲೂ ಪದೇ ಪದೆ ಗದ್ದಲವಾದ್ದರಿಂದ ಕಲಾಪವನ್ನು ಮುಂದೂಡಬೇಕಾಯಿತು. ಈ ಮಧ್ಯೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಸಂಸತ್‌ ಭವನದ ಮುಂದಿರುವ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‌ ಸಂಸದರು ಪ್ರತಿಭಟನೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next