Advertisement

Congressನವರನ್ನು ಓಡಿಸಿಕೊಂಡು ಮೈಸೂರಿನತ್ತ ಹೋಗುತ್ತಿದ್ದೇವೆ’: ಆರ್‌. ಅಶೋಕ್‌

01:22 AM Aug 09, 2024 | Team Udayavani |

ಶ್ರೀರಂಗಪಟ್ಟಣ: ಕಳ್ಳರನ್ನು ಪೊಲೀಸರು ಓಡಿಸಿಕೊಂಡು ಹೋದಂತೆ ನಾವು ಕಾಂಗ್ರೆಸ್‌ನವರನ್ನು ಓಡಿಸಿಕೊಂಡು ಮೈಸೂರಿನತ್ತ ಹೋಗುತ್ತಿದ್ದೇವೆ ಎಂದು ವಿಪಕ್ಷದ ನಾಯಕ ಆರ್‌. ಅಶೋಕ್‌ ಟೀಕಿಸಿದರು.

Advertisement

ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ನಮ್ಮ ಖಜಾನೆಯಲ್ಲಿದ್ದ ಬಡವರ ದುಡ್ಡನ್ನು ಕಾಂಗ್ರೆಸ್‌ನವರು ಲೂಟಿ ಮಾಡಿದ್ದಾರೆ. ಅವರು ಮೈಸೂರಿನತ್ತ ಹೋಗುತ್ತಿದ್ದಾರೆ. ನಾವು ಅವರನ್ನು ಹಿಡಿಯಲು ಹೋಗುತ್ತಿದ್ದೇವೆ. ನಾವು ಮೈಸೂರು ನೋಡಲು ಹೋಗುತ್ತಿಲ್ಲ ಎಂದು ಕಿಡಿಕಾರಿದರು.

ಮುಡಾದಲ್ಲಿ ಬಡವರಿಗೆ ಹಂಚಬೇಕಾದ ನಿವೇಶನಗಳನ್ನು ಕಾವಲು ಕಾಯಿರಿ ಎಂದು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ ನೀನು ಬಂದಿದ್ದನ್ನೆಲ್ಲ ಬಾಚಿಕೊಳ್ಳಲು ಆರಂಭಿಸಿದ್ದೀಯಾ. ಆ ಕಡೆ ಶಾಸಕರು ವರ್ಗಾವಣೆಯಲ್ಲಿ ಹಣ ಮಾಡಲು ಮುಂದಾಗಿದ್ದಾರೆ. ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡುತ್ತೇವೆ ಎಂದರು.

ಇದನ್ನು ಇಲ್ಲಿಯೇ ಬಿಡುತ್ತಾರೆಂದು ಸಿದ್ದರಾಮಯ್ಯ ತಿಳಿದುಕೊಂಡಿರಬಹುದು. ಆದರೆ ಕಾಂಗ್ರೆಸ್‌ ಅವನತಿ ಆಗುವವರೆಗೂ ನಾವು ಬಿಡುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next