Advertisement

ಜನಾದೇಶ ಸ್ವೀಕರಿಸುತ್ತೇವೆ; ಹೋರಾಟ ಮುಂದುವರಿಸುತ್ತೇವೆ: ಕೇಜ್ರಿ

04:25 PM Mar 11, 2017 | Team Udayavani |

ಹೊಸದಿಲ್ಲಿ : ಪಂಜಾಬ್‌ ಮತ್ತು ಗೋವೆಯಲ್ಲಿ ತಮ್ಮ ಪಕ್ಷ ಉತ್ತಮ ಚುನಾವಣಾ ನಿರ್ವಹಣೆ ತೋರಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿರುವ ಆಮ್‌ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು “ನಮ್ಮ ಪಕ್ಷ ಜನಾದೇಶವನ್ನು ಸ್ವೀಕರಿಸುತ್ತದೆ ಮತ್ತು ಹೋರಾಟವನ್ನು ಮುಂದುವರಿಸುತ್ತದೆ’ ಎಂದು ಹೇಳಿದ್ದಾರೆ.

Advertisement

“ನಾವು ಜನಾದೇಶವನ್ನು ಸ್ವೀಕರಿಸುತ್ತೇವೆ. ಪಕ್ಷದ ಎಲ್ಲ ಕಾರ್ಯಕರ್ತರು ಕಠಿನ ಪರಿಶ್ರಮ ನಡೆಸಿದ್ದಾರೆ. ಅಂತೆಯೇ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ. 

ಪಂಜಾಬ್‌ ಹಾಗೂ ಗೋವಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ತನ್ನ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಹೋರಾಡಿದೆ ಎಂದಿರುವ ಕೇಜ್ರಿವಾಲ್‌, ಕಳೆದ ಕೆಲವು ತಿಂಗಳಲ್ಲಿ ಪಂಜಾಬ್‌ ನಲ್ಲೇ ಅವರು 95 ರಾಲಿಗಳಲ್ಲಿ ಭಾಷಣ ಮಾಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next