Advertisement

Wayanad landslides : ಕೆನರಾ ಬ್ಯಾಂಕ್‌ 1 ಕೋಟಿ ನೆರವು

11:12 PM Aug 07, 2024 | Team Udayavani |

ತಿರುವನಂತಪುರ: ವಯನಾಡ್‌ ಭೂಕು ಸಿತದಿಂದ ತೊಂದರೆಗೆ ಒಳಗಾದವರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯ ಗಳಿಗೆ ಕೇರಳ ಸರ್ಕಾರಕ್ಕೆ ಕೆನರಾ ಬ್ಯಾಂಕ್‌ 1 ಕೋಟಿ ರೂ. ನೆರವು ನೀಡಿದೆ. ತಿರುವನಂತಪುರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರನ್ನು ಭೇಟಿ ಮಾಡಿದ ಕೆನರಾ ಬ್ಯಾಂಕ್‌ನ ತಿರುವನಂತಪುರ ವೃತ್ತದ ಮುಖ್ಯಸ್ಥ ಪ್ರದೀಪ್‌ ಕೆ. ಎಸ್‌. 1 ಕೋಟಿ ರೂ. ಮೊತ್ತದ ಡಿ.ಡಿ. ಹಸ್ತಾಂತರಿಸಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆನರಾ ಬ್ಯಾಂಕ್‌ನ ಮಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಸತ್ಯನಾರಾ ಯಣ ರಾಜು, ಕೆನರಾ ಬ್ಯಾಂಕ್‌ ಎಂದೆಂದಿಗೂ ತನ್ನ ಗ್ರಾಹಕರು ಮತ್ತು ಸಮುದಾಯಗಳಿಗೆ ಸೇವೆ ಸಲ್ಲಿಸಲು ಸದಾ ಮುಂಚೂಣಿ ಯಲ್ಲಿ ನಿಲ್ಲುತ್ತದೆ. ನಾವು ಸಂತ್ರಸ್ತರಿಗೆ ಎಲ್ಲಾ ರೀತಿಯ ಸಹಾಯ ನೀಡಲು ಬದ್ಧರಾಗಿದ್ದು, ಈ ಕೊಡುಗೆಯು ಅವರಲ್ಲಿ ಆಶಾಭಾವನೆಗಳನ್ನು ಹುಟ್ಟು ಹಾಕಲು ಬ್ಯಾಂಕ್‌ ನೀಡಿದ ಮೊತ್ತ ಒಂದು ಸಣ್ಣ ಕೊಡುಗೆಯಾಗಿದೆ ಎಂದು ಹೇಳಿದ್ದಾರೆ.

ಬ್ಯಾಂಕ್‌ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ 1 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next