Advertisement
ಭೂಕುಸಿತದಿಂದ ಹಾನಿಗೀಡಾಗಿರುವ ಚೂರಲ್ವುಲ, ಮುಂಡಕೈ, ಪಟ್ಟಮಲ ಸೇರಿ ಬಾಧಿತ ಪ್ರದೇಶ ಗಳಲ್ಲಿ ಜನರ ಬದುಕು ಮೊದಲಿನ ಸ್ಥಿತಿಗೆ ಮರಳಲು ಮತ್ತೆ ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ. ಇಡೀ ಊರಿಗೆ ಊರೇ ಕೊಚ್ಚಿಕೊಂಡು ಹೋಗಿರು ವುದರಿಂದ ಬದುಕುಳಿದವರಿಗೆ ಆಶ್ರಯ ಕಲ್ಪಿಸುವುದು ಸವಾಲಿನ ಕೆಲಸವಾಗಲಿದೆ.
Related Articles
Advertisement
ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವಿನ ಮಹಾಪೂರ!ವಯನಾಡ್: ಭೂಕುಸಿತದ ಹಿನ್ನಲೆಯಲ್ಲಿ ಕೇರಳ ಸಿಎಂ ಪರಿಹಾರ ನಿಧಿಗೆ ಆರ್ಥಿಕ ನೆರವು ಹರಿದು ಬರುತ್ತಿದೆ. ಲುಲು ಗ್ರೂಪ್ನ ಎಂ.ಎ. ಯೂಸುಫ್ ಅಲಿ, ಕಲ್ಯಾಣ್ ಜುವೆಲ್ಲರ್ಸ್ನ ಕಲ್ಯಾಣ ರಾಮನ್, ಹಾಗೂ ಉದ್ಯಮಿ ರವಿ ಪಿಳ್ಳೆ ತಲಾ 5 ಕೋ.ರೂ. ನೀಡಲಿದ್ದಾರೆ. ಗೌತಮ್ ಅದಾನಿ 5 ಕೋ.ರೂ. ಘೋಷಿಸಿದ್ದಾರೆ. ಕೆನರಾ ಬ್ಯಾಂಕ್ ಕೂಡ 5 ಕೋ.ರೂ. ನೀಡಲಿದೆ. ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್ಸಿಸಿ) 1 ಕೋ. ರೂ. ನೆರವಿನ ಹಸ್ತ ಚಾಚಿದೆ. ಕೇರಳದ ಸಂಪುಟದ ಎಲ್ಲ ಸಚಿವರು ಒಂದು ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪರಿಹಾರ ಸಮಿತಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಕೇರಳ ಸಿಎಂ ತಿಳಿಸಿದ್ದಾರೆ. ಕೇರಳದಲ್ಲಿ ಮತ್ತೆ ಹೆಚ್ಚಿನ ಮಳೆ ಸಾಧ್ಯತೆ: ಐಎಂಡಿ
ತಿರುವನಂತಪುರ: ಕೇರಳದಲ್ಲಿ ಹೆಚ್ಚಿನ ಮಳೆಯಾ ಗುವ ಸಾಧ್ಯತೆಯಿದ್ದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ. ಈಗಾಗಲೇ ಭೂಕುಸಿತಕ್ಕೊಳಗಾದ ಹಲವು ಭಾಗಗಳಲ್ಲಿ ಆ.1ರ ವರೆಗೂ ಮತ್ತಷ್ಟು ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಹೇಳಿದೆ. ಆ.2ರಂದೂ ಭಾರೀ ಮಳೆ ನಿರೀಕ್ಷೆಯಿದೆ. ಇದಲ್ಲದೇ ಕೇರಳಕ್ಕೆ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿಯು ಅಪ್ಪಳಿಸುವ ಸಾಧ್ಯತೆಯಿದೆ.