Advertisement

ಕೆರೆಗಳಿಗೆ ನೀರು: ಯೋಜನಾ ವರದಿ ತರಿಸಿ ಪರಿಶೀಲನೆ

08:42 AM Dec 19, 2018 | |

ವಿಧಾನಪರಿಷತ್ತು: ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತಾಗಿ ಸಮಗ್ರ ವರದಿ ತರಿಸಿಕೊಂಡು ಪರಿಶೀಲನೆ ನಡೆಸುವೆ, ತಪ್ಪು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದರು.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎನ್‌.ರವಿಕುಮಾರ ಪ್ರಶ್ನೆಗೆ ಉತ್ತರಿಸಿದ ಅವರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿ ತಾಗಿ ಸದಸ್ಯರ ಹಲವು ಆರೋಪಗಳನ್ನು ಗಮನಿಸಿದ್ದೇನೆ. ಇದರ ಪರಿಶೀಲನೆಗೆ ಕ್ರಮ ಕೈಗೊಂಡಿದ್ದೇನೆ. ಕೆರೆ ತುಂಬಿಸುವುದು ಸೇರಿ ವಿವಿಧ ಕಾಮಗಾರಿ ಗಳನ್ನು ಕೇವಲ ಕಾಗದಗಳಲ್ಲಿ ತೋರಿಸುವ ಬದಲು, ಹಂತ ಹಂತದ ಕಾಮಗಾರಿ ಫೋಟೊ ಹಾಗೂ ವಿಡಿ
ಯೊ ಚಿತ್ರೀಕರಣ ಕಡ್ಡಾಯ ಮಾಡಲಾಗಿದೆ. ಅದೇ ಆಧಾರದಲ್ಲಿ ಬಿಲ್‌ ಪಾವತಿ ಮಾಡಲಾಗುತ್ತದೆ ಎಂದರು. 2016-17ಮತ್ತು 2017-18ರ ಸಾಲಿನಲ್ಲಿ ನದಿಗಳಿಂದ ನೀರನ್ನು ಎತ್ತಿ ಕೆರೆಗಳಿಗೆ ತುಂಬಿಸುವ ಯೋಜನೆಗಳಿಗಂದ ಕ್ರಮವಾಗಿ 197 ಮತ್ತು 266 ಕೆರೆಗಳನ್ನು ತುಂಬಿಸಲಾಗಿದೆ. ಕೆಲವೊಂದು ಕಡೆ ನೀರು ಲಿಫ್ಟ್‌ ಮಾಡಬೇಕಾಗಿದೆ. ಇದಕ್ಕೆ ವಿದ್ಯುತ್‌ ಅವಶ್ಯಕತೆ ಇದ್ದು, ಇದರ ನಿರ್ವಹಣೆ ಹೇಗೆ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ವಿದ್ಯುತ್‌ ವೆಚ್ಚ ಭರಿಸುವ ಚಿಂತನೆಯಿದೆ ಎಂದರು.

ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿ ಕೆಲ ಸದಸ್ಯರು ಮಾತನಾಡಿ, ಸರ್ಕಾರ ಹೇಳಿದ ಕೆರೆಗಳಲ್ಲಿ ಶೇ.75ರಷ್ಟು ಕೆರೆ ತುಂಬಿಲ್ಲ ಎಂಬ ಆರೋಪವಿದ್ದು, ಈ ಬಗ್ಗೆ ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next