Advertisement

ಕುಸಿಯುವ ಭೀತಿಯಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್‌

08:10 PM Jan 11, 2019 | Karthik A |

ಕೋಟೇಶ್ವರ: ರಾ.ಹೆದ್ದಾರಿ 66 ರಿಂದ ಕವಲೊಡೆದು ಸಾಗುವ ಬೀಜಾಡಿ ವೈ ಜಂಕ್ಷನ್‌ನಲ್ಲಿ ಹೆದ್ದಾರಿಗೆ ತಾಗಿಕೊಂಡಂತೆ 33 ವರ್ಷ ಹಳೆಯ ಶಿಥಿಲಗೊಂಡ ನೀರಿನ ಟ್ಯಾಂಕ್‌ ಇದ್ದು ಕುಸಿಯುವ ಭೀತಿ ಎದುರಿಸುತ್ತಿದೆ. ಪಕ್ಕದಲ್ಲಿಯೇ ಅನೇಕ ಕುಟುಂಬಗಳು ವಾಸವಾಗಿದ್ದು ಬಿರುಕು ಬಿಟ್ಟಿರುವ ಟ್ಯಾಂಕ್‌ ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹ ಸಮಸ್ಯೆಯಿದ್ದರೂ, ಇದನ್ನು ನೆಲಸಮಗೊಳಿಸಲು ಮಾತ್ರ ಇಲಾಖೆ ಮೀನಮೇಷ ಎಣಿಸುತ್ತಿರುವುದು ಇಲ್ಲಿನ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

Advertisement

ತೆರವಿಗೆ ರೂ.2.50 ಲಕ್ಷ ವೆಚ್ಚ : 
ತೆರವಿನ ಕಾರ್ಯಕ್ಕೆ ಕನಿಷ್ಟ 2.50 ಲಕ್ಷ ವೆಚ್ಚವಾಗಲಿದೆ. ಗೋಪಾಡಿ ಗ್ರಾ.ಪಂ.ನಲ್ಲಿ ಆರ್ಥಿಕ ಸಮಸ್ಯೆ ಇರುವುದರಿಂದ ಅಷ್ಟೊಂದು ಹಣ  ಹೊಂದಾಣಿಕೆ ಮಾಡಲುಅಸಾಧ್ಯವಾಗಿದೆ. ಆದ್ದರಿಂದ ಸ್ಥಳೀಯರು ಟ್ಯಾಂಕ್‌ ತೆರವುಗೊಳಿಸುವಂತೆ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗ ಬೈಂದೂರು ಸಹಿತ, ಗೋಪಾಡಿ ಗ್ರಾ.ಪಂ., ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಆಶ್ವಾಸನೆ ನೀಡಿದ್ದಾರೆ
ಅನುದಾನದ ಕೊರತೆಯಿಂದ ವಾಟರ್‌ ಟ್ಯಾಂಕ್‌ ತೆರವು ಕಾರ್ಯಕ್ಕೆ ಹಿಂದೇಟು ಹಾಕಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಇಲಾಖೆಗಳನ್ನು ಸಂಪರ್ಕಿಸಲಾಗಿದೆ. ಜಿ.ಪಂ. ಸಿ.ಇ.ಒ. ಕ್ರಮ ಕೈಗೊಳ್ಳುವ ಅಶ್ವಾಸನೆ ನೀಡಿದ್ದಾರೆ. 
– ಗಣೇಶ ಪಿ., ಪಿ.ಡಿ.ಒ ಗೋಪಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next