Advertisement

ಇಂದು ನಗರಕ್ಕೆ ನೀರು ವಿತರಣೆ ಸಂಪೂರ್ಣ ಸ್ಥಗಿತ

10:49 AM Apr 20, 2018 | |

ಮಹಾನಗರ: ಮಂಗಳೂರಿಗೆನೀರು ಒದಗಿಸುವ ತುಂಬೆ ಡ್ಯಾಂನ ಕೆಳಗಿನ ರೇಚಕ ಸ್ಥಾವರಗಳಿಗೆ ಸಂಬಂಧಿಸಿ ಜಾಕ್‌ವೆಲ್‌ನಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಎ. 20ರಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ನಗರಕ್ಕೆ ನೀರು ವಿತರಣೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

Advertisement

ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯಲ್ಲಿ ಬರುವ 80 ಎಂ.ಎಲ್‌.ಡಿ.ಎಲ್‌.ಎಲ್‌.ಪಿ.ಎಸ್‌.-2 ಹಾಗೂ ನೀರು ಪೂರೈಕೆಯ ಮೂಲ ವಾದ ತುಂಬೆಯ ಕೆಳಗಿನ ರೇಚಕ ಸ್ಥಾವರಗಳಿಗೆ ಸಂಬಂಧಿಸಿದ ಜಾಕ್‌ ವೆಲ್‌ನಲ್ಲಿ ನೇತ್ರಾವತಿ ನದಿಯ ನೀರಿನಲ್ಲಿ ಹರಿದು ಬಂದ ತ್ಯಾಜ್ಯ ವಸ್ತುಗಳು, ಕಸಕಡ್ಡಿಗಳು, ಮಡ್ಡಿ ಮರಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್‌ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು, ಜಾಕ್‌ವೆಲ್‌ ಗಳಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯ, ಮಡ್ಡಿಯನ್ನು ಶುಚಿಗೊಳಿಸುವ ಕಾರ್ಯ ಹಾಗೂ ಎಚ್‌.ಎಲ್‌.ಪಿ.ಎಸ್‌.- 2ರಲ್ಲಿ ನಾನ್‌ ರಿಟರ್ನ್ ವಾಲ್ಟ್ ದುರಸ್ತಿ ಕೆಲಸ ಎ. 20ರಂದು ನಡೆಯಲಿದೆ ಎಂದು ಪಾಲಿಕೆ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next