Advertisement

ವಾರಾಹಿ ಅಣೆಕಟ್ಟು  ಪ್ರದೇಶಕ್ಕೆ ಸಚಿವ ಡಿಕೆಶಿ ಭೇಟಿ

09:43 AM Oct 03, 2018 | Team Udayavani |

ಸಿದ್ದಾಪುರ: ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಯಣ ಸಮೀಪ ಇರುವ ವಾರಾಹಿ ಅಣೆಕಟ್ಟು ಪ್ರದೇಶಕ್ಕೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮಂಗಳ ವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರಾಹಿ ಬಲ ದಂಡೆ ಯೋಜನೆ ಮತ್ತು ಉಡುಪಿಗೆ ಹಾಲಾಡಿ ಸಮೀಪದ ಭರತ್‌ಕಲ್‌ನಿಂದ ವಾರಾಹಿ ನೀರು ಹರಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾರಾಹಿ ನೀರಿನ ಮಟ್ಟ ಅರಿತು ಬಲದಂಡೆ ನೀರಾವರಿ ಯೋಜನೆ ಜಾರಿ ಮಾಡಲು ಸರಕಾರ ಚಿಂತಿಸಿದೆ. ಭರತ್‌ಕಲ್‌ನಿಂದ ಉಡುಪಿಗೆ ವಾರಾಹಿ ನೀರು ಒಯ್ಯುವ ಬಗ್ಗೆ ಮುಂದೆ ತಿಳಿಸುತ್ತೇನೆ ಎಂದರು.

Advertisement

ಮಾಜಿ ಶಾಸಕ ಗೋಪಾಲ ಪೂಜಾರಿ, ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್‌ ಯತೀಶ್ಚಂದ್ರ, ವಾರಾಹಿ ಅಧೀಕ್ಷಕ ಎಂಜಿ ನಿಯರ್‌ ಬಿ. ಪದ್ಮನಾಭ, ಎಂಜಿನಿಯರ್‌ಗಳಾದ ಪ್ರಸನ್ನ, ಕಿರಣ್‌, ಎನ್‌.ಜಿ. ಭಟ್‌, ಪ್ರೀತಮ್‌, ಅಶೋಕ್‌ ಉಪಸ್ಥಿತರಿದ್ದರು.

ದೇವಸ್ಥಾನ ಭೇಟಿ
ಸಚಿವರು ವಾರಾಹಿ ಅಣೆ ಕಟ್ಟಿನ ಪಕ್ಕದಲ್ಲಿರುವ ಶ್ರೀ ಹೊಳೆ ಶಂಕರ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಸಚಿವರ ಪತ್ನಿ ಹಾಗೂ ಪುತ್ರಿ ಪ್ರತ್ಯೇಕವಾಗಿ ಹೊಸಂಗಡಿಯ ಕರ್ನಾಟಕ ಪವರ್‌ ಕಾರ್ಪೊರೇಶನ್‌ನ ಭೂಗರ್ಭ ವಿದ್ಯುದಾಗಾರಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next