Advertisement

ಮೊದಲ ಬಾರಿಗೆ ಬತ್ತಿದ ಕಿಂಡಿ ಅಣೆಕಟ್ಟು, ಅಜೆಕಾರು ಪರಿಸರದಲ್ಲಿ ನೀರಿನದ್ದೇ ಸಮಸ್ಯೆ

09:01 AM May 17, 2019 | keerthan |

ಅಜೆಕಾರು: ಅದು ದಶಕಗಳ ಹಿಂದೆ ಕಟ್ಟಿದ ಕಿಂಡಿ ಅಣೆಕಟ್ಟು, ಎಂದೂ ಬತ್ತದ ದರ್ಬುಜೆ ದೆಕ್ಕಟ್ಟೆ ನದಿ ನೀರು, ಆದರೆ ಈಗ ಕಿಂಡಿ ಅಣೆಕಟ್ಟಿನಲ್ಲಿ ನೀರಿಲ್ಲ. ಜನರಿಗೆ ಮೊದಲ ಭಾರಿಗೆ ನೀರಿನ ಸಮಸ್ಯೆ. ಇದು ಅಜೆಕಾರು, ಮರ್ಣೆ ಗ್ರಾಮದ ನೀರಿನ ಸಮಸ್ಯೆಯ ಕಥೆ.

Advertisement

ಹೌದು, ದಶಕಗಳ ಹಿಂದೆ ಕಿಂಡಿ ಅಣೆಕಟ್ಟು ಕಟ್ಟಿ ನೀರಿನ ಸಮಸ್ಯೆಗೆ ಪರಿಹಾರ ಕೈಗೊಂಡಿದ್ದ ಈ ಭಾಗದ ಜನರಿಗೆ ಈಗ ಮತ್ತೆ ನೀರಿನ ಸಮಸ್ಯೆ ಭೂತ ಕಾಡುತ್ತಿದೆ. ಈ ಭಾಗದ ಜನರಿಗೆ ನೀರು ಸರಬರಾಜು ಮಾಡುತ್ತಿದ್ದ ಕಿಂಡಿ ಅಣೆಕಟ್ಟಿನ ನೀರು ದಶಕಗಳ ನಂತರ ಮೊದಲ ಬಾರಿಗೆ ಆವಿಯಾಗಿದೆ.

ಸದ್ಯ ಈ ನೀರಿನ ಸಮಸ್ಯಗೆ ತಾತ್ಕಾಲಿನ ಪರಿಹಾರ ಕೈಗೊಂಡಿದ್ದು, ಹೊಳೆಯ ಹೂಳೆತ್ತಿ ಕಿಂಡಿ ಅಣೆಕಟ್ಟಿಗೆ ನೀರು ಸರಬರಾಜು ವ್ಯವಸ್ಥೆ ಮಾಡಲಾಗಿದೆ. ಅಜೆಕಾರು- ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಕುಮಾರ್ ಅವರು ಮುತುವರ್ಜಿ ವಹಿಸಿ ಜೆಸಿಬಿ ಮೂಲಕ ಹೊಳೆಯ ನೀರನ್ನು ಅಣೆಕಟ್ಟು ಭಾಗಕ್ಕೆ ಹರಿಸುವ ವ್ಯವಸ್ಥೆ ಮಾಡಿದರು. ಮುಂದೆ ನೀರನ್ನು ಫಿಲ್ಟರ್ ಮಾಡಿ ಗ್ರಾಮದ ಜನರಿಗೆ ಉಪಯೋಗಕ್ಕೆ ನಿಡಲಾಗುವುದು ಎಂದು ಅಜೆಕಾರು ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಕುಮಾರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next