Advertisement
ಅವರ ಮಕ್ಕಳಾದ ಸುಹಾನಾ ಮತ್ತು ಅಬ್ರಾಮ್ ಜತೆಗೆ ಸಂಭ್ರಮ ಆಚರಿಸುತ್ತಿದ್ದ ಶಾರುಖ್ ಆನ್-ಗ್ರೌಂಡ್ ಲೈವ್ ಶೋಗೆ ಅಡ್ಡಿಪಡಿಸಿದರು. ತಪ್ಪನ್ನು ಮನಗಂಡ ಶಾರುಖ್ ಪಂದ್ಯವನ್ನು ವಿಶ್ಲೇಷಿಸುತ್ತಿದ್ದ ಮಾಜಿ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಪಾರ್ಥಿವ್ ಪಟೇಲ್ ಮತ್ತು ಸುರೇಶ್ ರೈನಾ ಅವರಲ್ಲಿ ಕ್ಷಮೆಯಾಚಿಸಿದರು.
Related Articles
ಶಾರುಖ್ ಅವರ ಉಪಸ್ಥಿತಿಯು ತಂಡದ ಮನಸ್ಥಿತಿಯನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಕುರಿತು ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಮಾತನಾಡಿ. “ತಂಡದಲ್ಲಿ ಅವರ ಉಪಸ್ಥಿತಿಯು ತಂಡದ ವಾತಾವರಣಕ್ಕೆ ಉತ್ಸಾಹವನ್ನು ಸೇರಿಸುತ್ತದೆ. ತಂಡದ ವರ್ತನೆ ಮತ್ತು ವಿಧಾನವು ಸ್ವಯಂಚಾಲಿತವಾಗಿ ಬದಲಾಗುತ್ತದೆ” ಎಂದು ಹಾಡಿ ಹೊಗಳಿದ್ದಾರೆ. ಅಮೋಘ ಗೆಲುವಿನ ಬಳಿಕ ಶಾರುಖ್, ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಬಿಗಿದಪ್ಪಿ ಸಂಭ್ರಮ ಹಚ್ಚಿಕೊಂಡರು.
Advertisement
ಕಿಂಗ್
ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರಕ್ಕೆ ಸಜ್ಜಾಗುತ್ತಿದ್ದು ತಾತ್ಕಾಲಿಕವಾಗಿ ‘ಕಿಂಗ್’ ಎಂದು ಶೀರ್ಷಿಕೆ ಇಡಲಾಗಿದ್ದು ಚಿತ್ರರಲ್ಲಿ ಬಹುಶಃ ಸುಹಾನಾ ಖಾನ್ ಕೂಡ ನಟಿಸಲಿದ್ದಾರೆ, ಆದರೆ ತಯಾರಕರು ಇನ್ನೂ ಅಧಿಕೃತ ಘೋಷಣೆ ಮಾಡಿಲ್ಲ.