Advertisement

ರುದ್ರಭೂಮಿ ಆವರಣಕ್ಕೆ ತ್ಯಾಜ್ಯ: ಸ್ಥಳೀಯರ ಆಕ್ಷೇಪ

02:11 PM Oct 21, 2018 | |

ಬೆಳ್ತಂಗಡಿ: ಬೆಳ್ತಂಗಡಿ ನಗರದ ಹಿಂದೂ ರುದ್ರ ಭೂಮಿಯ ಆವರಣದಲ್ಲಿ ಶೌಚಾಲಯದ ತ್ಯಾಜ್ಯಯನ್ನು ಡಂಪ್‌ ಮಾಡಲಾಗುತ್ತಿದ್ದು, ಸ್ಥಳೀಯ ನಿವಾಸಿಗಳು ಅದಕ್ಕೆ ಆಕ್ಷೇಪವೆತ್ತಿದ್ದಾರೆ. ಈ ಪ್ರದೇಶವು ಪ.ಪಂ.ನ 4ನೇ ವಾರ್ಡ್‌ ವ್ಯಾಪ್ತಿಗೆ ಬರುತ್ತಿದ್ದು, ಪರಿಹಾರ ಸಿಗದೇ ಇದ್ದರೆ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಶೌಚಾಲಯದ ತ್ಯಾಜ್ಯವನ್ನು ಸಕ್ಕಿಂಗ್‌ ಯಂತ್ರದ ಮೂಲಕ ಲಿಫ್ಟ್‌ ಮಾಡಿ ರುದ್ರಭೂಮಿಯ ಆವರಣದ ನದಿ ಕಿನಾರೆಯಲ್ಲಿ ಬೃಹತ್‌ ಹೊಂಡದಲ್ಲಿ ಡಂಪ್‌ ಮಾಡಲಾಗುತ್ತದೆ. ಆದರೆ ಇದು ತೆರೆದು ಕೊಂಡಿರುವುದರಿಂದ ದುರ್ನಾತ ಬೀರುವ ಜತೆಗೆ ಹೊಂಡವು ದನಕರುಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಪ್ರಸ್ತುತ ಮಳೆಗಾಲ ಆಗಿರುವುದರಿಂದ ದುರ್ನಾತ ಕಡಿಮೆ ಇದೆ. ಆದರೆ ಬೇಸಗೆಯಲ್ಲಿ ದುರ್ನಾತ ಬೀರುವ ಜತೆಗೆ ನೊಣ-ಸೊಳ್ಳೆಗಳ ಕಾಟವೂ ಅಧಿಕಗೊಳ್ಳುತ್ತದೆ. ಪರಿಣಾಮವಾಗಿ ಸ್ಥಳೀಯ ಸುಮಾರು 60 ಮನೆಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಅದನ್ನು ಬೇರಡೆಗೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.

ಪೊದೆ ಆವರಿಸಿದೆ
ತ್ಯಾಜ್ಯವನ್ನು ಡಂಪ್‌ ಮಾಡುವ ಸ್ಥಳವು ಪ್ರಸ್ತುತ ಪೂರ್ತಿ ಪೊದೆಯಿಂದ ತುಂಬಿಕೊಂಡಿದೆ. ಅಲ್ಲಿ ಹೊಂಡ ಇರುವುದು ಕೂಡ ಅರಿವಿಗೆ ಬರುವುದಿಲ್ಲ. ಈ ಪ್ರದೇಶದಲ್ಲಿ ಹೆಚ್ಚಿನ ಹುಲ್ಲು ಬೆಳೆಯುವುದರಿಂದ ದನಕರುಗಳು ರುಧ್ರಭೂಮಿಯ ಆವರಣಕ್ಕೆ ಮೇಯಲು ಬರುತ್ತದೆ. ಈ ಸಂದರ್ಭದಲ್ಲಿ ಮೇಯುತ್ತಾ, ಈಗಾಗಲೇ ಸಾಕಷ್ಟು ದನಗಳು ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ತ್ಯಾಜ್ಯವನ್ನು ಹಾಕುವುದರಿಂದ ಬೀದಿ ನಾಯಿಗಳ ಕಾಟವೂ ಅಧಿಕವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರುಧ್ರಭೂಮಿ ಆವರಣದಲ್ಲಿ ಸಕ್ಕಿಂಗ್‌ ಯಂತ್ರವನ್ನು ನಿಲ್ಲಿಸುವುದಕ್ಕೂ ಆಕ್ಷೇಪಗಳು ಕೇಳಿಬರುತ್ತಿವೆ.

ಮನವಿಗೆ ನಿರ್ಧಾರ 
ತ್ಯಾಜ್ಯದ ದುರ್ನಾತದಿಂದ ಬೇಸತ್ತಿರುವ ಸ್ಥಳೀಯರು ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರಿಗೆ ಮನವಿ ನೀಡಲು ನಿರ್ಧರಿಸಿದ್ದಾರೆ. ಅವರ ಜತೆ ಚರ್ಚಿಸಿ ಮತದಾನದಲ್ಲಿ ಭಾಗವಹಿಸುವ ಕುರಿತು ನಿರ್ಧರಿಸಲಿದ್ದೇವೆ. ಸಕಾರಾತ್ಮಕ ಉತ್ತರ ದೊರಯದೇ ಇದ್ದಲ್ಲಿ ಬಹಿಷ್ಕಾರದ ಚಿಂತನೆ ನಡೆಸಲಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next