Advertisement

ಕುಚ್ಚೂರು ಬೇಳಂಜೆ ಬಳಿ ತ್ಯಾಜ್ಯ ರಾಶಿ: ಡೆಂಗ್ಯೂ ಹರಡುವ ಭೀತಿ

10:23 AM Aug 13, 2019 | Team Udayavani |

ಹೆಬ್ರಿ: ಚಾರ ಗ್ರಾ.ಪಂ. ವ್ಯಾಪ್ತಿಯ ಕುಚ್ಚೂರು ಬೇಳಂಜೆ ಸೇತುವೆ ಸಮೀಪ ತ್ಯಾಜ್ಯ ರಾಶಿಯಾಗಿ ಬಿದ್ದಿದ್ದು ಡೆಂಗ್ಯೂನಂತಹ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.

Advertisement

ಈ ಪರಿಸರದಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿರುವುದ ರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಪ್ಲಾಸ್ಟಿಕ್‌ ಕಸ, ಕೊಳೆತ ಆಹಾರ ಪದಾರ್ಥ, ಸತ್ತ ಪ್ರಾಣಿ ಮೊದಲಾದ ತ್ಯಾಜ್ಯಗಳನ್ನು ಈ ಭಾಗದಲ್ಲಿ ಎಸೆಯುತ್ತಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಕೊಳೆತ ತ್ಯಾಜ್ಯದ ನೀರು ಹತ್ತಿರದಲ್ಲಿ ಹರಿಯುವ ನದಿಗೆ ಸೇರುತ್ತಿದ್ದು ಕೆಲವೊಂದು ಮನೆಗಳಲ್ಲಿ ನದಿಯ ನೀರನ್ನೆ ಬಳಸುತ್ತಿದ್ದಾರೆ. ಅಲ್ಲದೆ ತ್ಯಾಜ್ಯದ ನೀರು ಸಮೀಪದ ಮನೆಗಳ ಬಾವಿಯನ್ನೂ ಸೇರುತ್ತಿವೆ.

ಸಾವನ್ನಪ್ಪಿದ ಹಸುಗಳು

ತ್ಯಾಜ್ಯದಲ್ಲಿ ಆಹಾರ ಪದಾರ್ಥಗಳೂ ಇರುವುದರಿಂದ ಅದನ್ನು ತಿನ್ನಲು ಈ ಭಾಗದ ದನಗಳು ಬರುತ್ತಿದ್ದು, ಆಹಾರದ ಜತೆಗೆ ತ್ಯಾಜ್ಯದ ನಡುವೆ ಇರುವ ಪ್ಲಾಸ್ಟಿಕ್‌ ಕಸಗಳನ್ನೂ ತಿನ್ನುತ್ತಿವೆ. ಈಗಾಗಲೇ ಹಲವು ಹಸುಗಳು ಪ್ಲಾಸ್ಟಿಕ್‌ ತಿಂದು ಸಾವನ್ನಪ್ಪಿದ್ದು ದಿನದಿಂದ ದಿನಕ್ಕೆ ಸಾವನ್ನಪ್ಪುತ್ತಿರುವ ಹಸುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next