Advertisement

ಕರ್ತವ್ಯದಲ್ಲಿದ್ದ ವೇಳೆ ಗದಗದ ಯೋಧ ಹೃದಯಾಘಾತದಿಂದ ವಿಧಿವಶ 

05:24 PM Nov 04, 2018 | Team Udayavani |

ಗದಗ : ಅಸ್ಸಾಂನಲ್ಲಿ  ಕರ್ತವ್ಯದಲ್ಲಿದ್ದ ವೇಳೆಯಲ್ಲೇ ಕರ್ನಾಟಕದ ಯೋಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. 

Advertisement

ಶಿರಹಟ್ಟಿಯ ಹೆಬ್‌ಬಾಳ ಗ್ರಾಮದ  ಬಸನಗೌಡ ಪಾಟೀಲ್‌ (39) ಅವರು ಮೃತ ಸಿಆರ್‌ಪಿಎಫ್ ಯೋಧ. ಕಳೆದ 19ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅವರ ನಿವೃತ್ತಿಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಉಳಿದಿತ್ತು. 

ಬಸನಗೌಡ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಪಾರ್ಥೀವ ಶರೀರ ಸೋಮವಾರ ಸಂಜೆ ಮನೆಗೆ ತಲುಪಲಿದ್ದು ಆ ಬಳಿಕ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next