Advertisement

ಅಫ್ಘಾನಿಸ್ಥಾನದಲ್ಲಿ ನಮ್ಮ ಯುದ್ಧ ಅಂತ್ಯವಾಗಿದೆ, ಶಾಂತಿ ಸಂಬಂಧ ಬಯಸುತ್ತೇವೆ: ತಾಲಿಬಾನ್

08:47 AM Aug 16, 2021 | Team Udayavani |

ಕೈರೋ: ಅಫ್ಘಾನಿಸ್ಥಾನದಲ್ಲಿ ನಮ್ಮ ಯುದ್ಧ ಅಂತ್ಯವಾಗಿದೆ. ಇನ್ನು ಮುಂದೆ ಅಂತಾರಾಷ್ಟ್ರೀಯ ಸಮುದಾಯದ ಜೊತೆ ಶಾಂತಿ ಸಂಬಂಧ ಬಯಸುವುದಾಗಿ ತಾಲಿಬಾನ್ ವಕ್ತಾರ ಹೇಳಿದ್ದಾರೆ.

Advertisement

ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್ ಅವರು ಅಲ್ ಜಜೀರಾ ಟಿವಿಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ಪ್ರತ್ಯೇಕವಾಗಿ ಬದುಕಲು ಬಯಸುವುದಿಲ್ಲ ಮತ್ತು ನಿಯಮಾವಳಿಗಳು ಮತ್ತು ಆಡಳಿತದ ರೂಪ ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಶರಿಯಾ ಕಾನೂನಡಿಯಲ್ಲೇ ತಾಲಿಬಾನ್ ಮಹಿಳಾ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಎಂದು ನಯೀಮ್ ಹೇಳಿದ್ದಾರೆ.

ಇದನ್ನೂ ಓದಿ:ತಾಲಿಬಾನ್ ತರ ಯೋಚಿಸಿದರೆ ,ಮಟ್ಟ ಹಾಕುವುದಕ್ಕೂ ಗೊತ್ತಿದೆ : ಭರತ್ ಶೆಟ್ಟಿ ವೈ

ತಾಲಿಬಾನ್ ಶಾಂತಿಯುತ ಸಂಬಂಧಗಳನ್ನು ಹೊಂದಲು ಬಯಸುತ್ತದೆ ಮತ್ತು ವಿದೇಶಗಳೊಂದಿಗೆ ಈಗಾಗಲೇ ತೆರೆದಿರುವ ಹಲವಾರು ಸಂವಹನ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಉತ್ಸುಕವಾಗಿದೆ. ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ನಮ್ಮೊಂದಿಗೆ ಚರ್ಚಿಸುವಂತೆ ನಾವು ಎಲ್ಲಾ ದೇಶಗಳು ಮತ್ತು ಘಟಕಗಳನ್ನು ಕೇಳಿ ಕೊಳ್ಳುತ್ತೇವೆಎಂದು ತಾಲಿಬಾನ್ ವಕ್ತಾರ ಸಂದರ್ಶನದಲ್ಲಿ ಹೇಳಿದರು.

Advertisement

ರವಿವಾರ ತಾಲಿಬಾನ್ ಉಗ್ರರು ಕಾಬೂಲ್‌ ಪ್ರವೇಶಿಸಿದ್ದಾರೆ. ಈ ಮೂಲಕ ಇಡೀ ದೇಶವೇ ಉಗ್ರರ ಪಾಲಾಗಿದ್ದು, 20 ವರ್ಷಗಳ ಬಳಿಕ ಮತ್ತೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಶಕೆ ಆರಂಭವಾಗಿದೆ. ತಾಲಿಬಾನ್ ಕಾಬೂಲ್ ಪ್ರವೇಶಿಸುತ್ತಿದ್ದಂತೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿದ ವಕ್ತಾರ ನಯೀಮ್, “ಘನಿ ತಪ್ಪಿಸಿಕೊಳ್ಳುವುದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಆತನ ಆಪ್ತರು ಕೂಡ ಅದನ್ನು ನಿರೀಕ್ಷಿಸಿರಲಿಲ್ಲ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next