Advertisement

ವಕ್ಫ್ ಆಸ್ತಿ ಕಬಳಿಕೆ ತಡೆಯಲು ಮನವಿ

04:12 PM Sep 30, 2021 | Team Udayavani |

ರಾಯಚೂರು: ಬಹುಮೌಲ್ಯದ ವಕ್ಫ್ ಆಸ್ತಿ ಯನ್ನು ಕೊಳ್ಳೆ ಹೊಡೆಯಲು ನೋಂದಣಾಕಾರಿಗಳೇ ಹುನ್ನಾರ ನಡೆಸಿದ್ದು, ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಆಸ್ತಿ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿ ದಿ ಲಿಜೆಂಡ್‌ ಟಿಪ್ಪು ಸುಲ್ತಾನ್‌ ಸಂಘದ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘದ ಸದಸ್ಯರು, ಜಿಲ್ಲಾ ನೋಂದಣಾಧಿಕಾರಿ ಹಾಗೂ ಉಪ ನೋಂದಣಾಧಿಕಾರಿ ಸೇರಿ ವಕ್ಫ್  ಆಸ್ತಿ ಮಾರಲು ಹುನ್ನಾರ ನಡೆಸಿದ್ದಾರೆ. ತಾಲೂಕಿನ ಹುಣಸಿಹಾಳ ಹುಡಾ ಗ್ರಾಮದ ಸರ್ವೇ ನಂ.68/*/1, 2 ಎಕರೆ 2 ಗುಂಟೆ ವಕ್ಫ್  ಆಸ್ತಿ ಇದೆ. ಅದನ್ನು ಮಹ್ಮದ ಇಲಿಯಾಸ್‌ ಪಾಷಾ ತಂದೆ ಮಹ್ಮದ್‌ ಖಾಸರ್‌ ಪಾಷಾ ಎನ್ನುವವರ ಹೆಸರಿಗೆ ನೋಂದಣಿ ಮಾಡಲು ಮುಮ್ರಾಜ್‌ ಬೇಗಂ ಗಂಡ ಶೇಖ್‌ ಅಲಿ ಇವರು ಅರ್ಜಿ ಸಲ್ಲಿಸಿದ್ದಾರೆ. ಈ ಆಸ್ತಿಯು ಅಗ್ರಿಮೆಂಟ್‌ ಆಫ್‌ ಸೇಲ್‌ ಆಗಿದ್ದು, ಇನ್ನೂ ಸೇಲ್‌ ಡೀಡ್‌ ಆಗಿಲ್ಲ ಎಂದು ವಿವರಿಸಿದರು.

ಈ ಆಸ್ತಿಯು ಪಹಣಿಯಲ್ಲಿ ವಕ್ಫ್  ಬೋರ್ಡ್‌ ಸರ್ಕಾರಿ ಜಮೀನು ಎಂದೇ ತೋರಿಸುತ್ತದೆ. ಈ ಕುರಿತು ಉಪ ನೋಂದಣಾ ಧಿಕಾರಿಗಳು ಸೇಲ್‌ ಆಫ್‌ ಅಗ್ರಿ ಮೆಂಟ್‌ ಮಾಡಿದ್ದು, ಜಿಲ್ಲಾ ನೋಂದಣಾಧಿಕಾರಿಗಳು ರಾಯಚೂರು ಇವರಿಗೆ ದೂರು ಸಲ್ಲಿಸಲಾಗಿದೆ. ಆದರೆ, ವಕ್ಫ್  ಆಸ್ತಿ ಎಂದು ಗೊತ್ತಾದರೂ ಉಪ ನೋಂದಣಾ ಧಿಕಾರಿಗಳ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ಈ ಅಕ್ರಮದಲ್ಲಿ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ ಎಂದರು.

ಈ ಕುರಿತು ಕೇಳಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸರ್ಕಾರಿ ಜಮೀನನ್ನು ವರ್ಗಾವಣೆ ಮಾಡಿದ್ದಾರೆಯೇ ಇಲ್ಲವೇ ಎಂದು ತನಿಖೆ ನಡೆಸಿ ಕಾನೂನು ಕ್ರಮ ವಹಿಸಿಬೇಕು. ಇಲ್ಲದಿದ್ದಲ್ಲಿ ಈ ಕುರಿತು ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ರಾಜ್ಯಾಧ್ಯಕ್ಷ ಸೈಯದ್‌ ರಶೀದ್‌, ರಾಜ್ಯ ಕಾರ್ಯದರ್ಶಿ ಇಮ್ರಾನ್‌ ಬಡೇಸಯ, ಮಹ್ಮದ್‌ ಅನ್ಸಾರ್‌, ಶೇಖ್‌ ಇಸ್ಮಾಯಿಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next