Advertisement

Wankhede Stadium ಸಚಿನ್‌ ಪ್ರತಿಮೆ ಅನಾವರಣ

12:33 AM Nov 02, 2023 | Team Udayavani |

ಮುಂಬಯಿ: ಭಾರತ ಮತ್ತು ಶ್ರೀಲಂಕಾ ನಡುವಣ ವಿಶ್ವಕಪ್‌ ಪಂದ್ಯದ ಮುನ್ನಾದಿನವಾದ ಬುಧವಾರ ಇಲ್ಲಿನ ವಾಂಖೇಡೆ ಕ್ರೀಡಾಂಗಣದ ಮುಂಭಾಗದಲ್ಲಿ ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಅವರ ಬೃಹತ್‌ ಗಾತ್ರದ ಪ್ರತಿಮೆಯನ್ನು ಅನಾ ವರಣ ಮಾಡಲಾಯಿತು.

Advertisement

ತೆಂಡುಲ್ಕರ್‌ ಅವರು ಬ್ಯಾಟಿಂಗ್‌ ಮಾಡುವಂತೆ ಇರುವ ಪ್ರತಿಮೆಯನ್ನು ಅಹ್ಮದ್‌ನಗರದ ಶಿಲ್ಪಿ ಚಿತ್ರ ಕಲಾವಿದ ಪ್ರಮೋದ್‌ ಕಾಂಬ್ಳೆ ನಿರ್ಮಿಸಿದ್ದಾರೆ. ಈ ಪ್ರತಿಮೆ ಯನ್ನು ಬೃಹತ್‌ ಚೆಂಡಿನ ಮೇಲೆ ನಿಲ್ಲಿಸಲಾಗಿದೆ.

ತೆಂಡುಲ್ಕರ್‌ ಅವರ ಕುಟುಂಬದ ಸದಸ್ಯರಲ್ಲದೇ ಮಹಾರಾಷ್ಟ್ರದ ಮುಖ್ಯ ಮಂತ್ರಿ ಏಕನಾಥ ಶಿಂದೆ, ಉಪಮುಖ್ಯ ಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಮಾತ್ರವಲ್ಲದೇ ಭಾರತೀಯ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಜಯ್‌ ಶಾ, ಕೋಶಾಧಿಕಾರಿ ಆಶಿಷ್‌ ಶೆಲರ್‌, ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ನ ಅಧ್ಯಕ್ಷ ಅಮೋಲ್‌ ಕಾಳೆ, ಕಾರ್ಯದರ್ಶಿ ಅಜಿಂಕ್ಯ ನಾೖಕ್‌ ಮುಂತಾದವರು ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next