Advertisement

ಕುಡಿಯುವ ನೀರಿಗಾಗಿ ತಪ್ಪದ ಜನರ ಅಲೆದಾಟ

06:47 PM Mar 29, 2021 | Team Udayavani |

ದೇವದುರ್ಗ: ತಾಲೂಕಿನಲ್ಲಿ ಕೃಷ್ಣಾನದಿ ಉಕ್ಕಿ ಹರಿದರೂ ಪಟ್ಟಣದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕುಡಿವ ನೀರಿಗಾಗಿ ಜನ ಪರದಾಡುವಂತಾಗಿದೆ. ಕುಡಿವ ನೀರಿನ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ನೀರು ಪೂರೈಸುವ ಗಾಗಲ್ ಬಳಿಯ ಜಾಕ್‌ವೆಲ್‌ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾದ್ದರಿಂದ ಜನರು ನೀರಿಗಾಗಿ ಎಲ್ಲೆಂದರಲ್ಲಿ ಅಲೆಯುವಂತಾಗಿದೆ.

Advertisement

ಆದರೀಗ ಜಾಕ್‌ವೆಲ್‌ದೊಳಗೆ ಕಸಕಡ್ಡಿ ಇತರೆ ವಸ್ತುಗಳು ಹಾವು, ಪ್ರಾಣಿ-ಪಕ್ಷಿ ಬಿದ್ದು ಮೃತಪಟ್ಟಿದ್ದರಿಂದ ನೀರು ಪೂರೈಕೆಗೆ ಸಮಸ್ಯೆ ಉಂಟಾಗಿದೆ. ಕುಡಿವ
ನೀರಿಗಾಗಿ ನಿವಾಸಿಗಳು ವಾರ್ಡ್‌ನ ಸದಸ್ಯರ ಬೆನ್ನತ್ತಿದ್ದಾರೆ. ಜನ-ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಿದೆ. ಎರಡ್ಮೂರು ದಿನದಿಂದ ದುರಸ್ತಿ ಕಾರ್ಯ ನಡೆದಿದ್ದು, ನಾಳೆ ಅಥವಾ ನಾಡಿದ್ದು, ಪಟ್ಟಣಕ್ಕೆ ನೀರು ಪೂರೈಸುವ ಚಿಂತನೆ ನಡೆದಿದೆ.

ಆಗಾಗ ಪೈಪ್‌ ಒಡೆದು ಲಕ್ಷಾಂತರ ರೂ. ಅನುದಾನ ವ್ಯಯ ಮಾಡಲಾಗಿದೆ. ಆದರೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪುರಸಭೆ ವಿಫಲವಾಗಿದೆ ಎಂದು
ಆರೋಪಿಸುತ್ತಾರೆ ನಾಗರಿಕರು.

ತಾಂತ್ರಿಕ ಸಮಸ್ಯೆ ಹಿನ್ನೆಲೆ ಎರಡ್ಮೂರು ದಿನಗಳಿಂದ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ದುರಸ್ತಿ ಕೆಲಸ ನಡೆದಿದೆ. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇನೆ. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬುರಾಜು ಮಾಡಲಾಗುತ್ತದೆ.
ಹನುಮಗೌಡ ಶಂಕರಬಂಡಿ
ಪುರಸಭೆ ಅಧ್ಯಕ್ಷ

ಜಾಕ್‌ವೆಲ್‌ದೊಳಗೆ ಕಸಕಡ್ಡಿ ಇತರೆ ವಸ್ತುಗಳು ಬಿದ್ದಿರುವ ಹಿನ್ನೆಲೆ ನೀರು ಪೂರೈಕೆಯಲ್ಲಿ ವಿಳಂಬವಾಗಿದೆ. ದುರಸ್ತಿ ಕೆಲಸ ನಡೆದಿದ್ದು, ಸೋಮವಾರ ನೀರು ಪೂರೈಸಲು ಸಕಲ ಸಿದ್ಧತೆ ನಡೆದಿದೆ.
ಶರಣಪ್ಪ, ಪುರಸಭೆ ಮುಖ್ಯಾಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next