Advertisement

ದಿಲ್ಲಿಯಿಂದ ವಾಘಾಕ್ಕೆ ಪಾದಯಾತ್ರೆ

01:08 PM Dec 29, 2017 | |

ಉಡುಪಿ: ಉಡುಪಿ ಕಡೆಕಾರಿನ ಜಯಪ್ರಕಾಶ್‌ ಶೆಟ್ಟಿ ಅವರು ದಿಲ್ಲಿಯಿಂದ ವಾಘಾ ಗಡಿಯವರೆಗೆ ಪಾದಯಾತ್ರೆ ನಡೆಸಿದ್ದಾರೆ.

Advertisement

ದಿಲ್ಲಿಯಿಂದ ವಾಘಾ ಗಡಿಯವರೆಗೆ 500 ಕಿ.ಮೀ. ವರೆಗೆ ನಡೆಯುವ ಜಯಪ್ರಕಾಶ್‌ ಶೆಟ್ಟಿ ಅವರ ಪಾದಯಾತ್ರೆಗೆ
ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಆಸ್ಕರ್‌ ಫೆರ್ನಾಂಡಿಸ್‌ ಅವರು ಡಿ. 15ರಂದು ದಿಲ್ಲಿಯ ತಮ್ಮ ನಿವಾಸದಲ್ಲಿ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದ್ದರು. ಪಾದಯಾತ್ರೆಯಲ್ಲಿ ಪಾಣಿಪತ್‌, ಅಂಬಳ, ಲೂಧಿಯಾನ, ಜಾಲಂಧರ್‌, ಅಮೃತಸರ ಮೂಲಕ ವಾಘಾ ಗಡಿಯನ್ನು ಶೆಟ್ಟಿ ಅವರು ಡಿ. 27ರಂದು ತಲುಪಿದ್ದಾರೆ. ಬಿಎಸ್‌ಎಫ್ ಜವಾನರು, ಅಧಿಕಾರಿಗಳು ಶೆಟ್ಟಿಯವರನ್ನು ಸ್ವಾಗತಿಸಿ, ಪಾದಯಾತ್ರೆಗೆ ಮೆಚ್ಚುಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next