Advertisement

ಕಮಲ ಪಾಳೆಯದ ಕಮರದ ಆಶಾಭಾವನೆ

01:00 AM Jan 17, 2019 | |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಗ್ಗಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುವ ಭರವಸೆ ಯನ್ನು ಇನ್ನೂ ಇಟ್ಟುಕೊಂಡಿರುವ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದೆ. ಅದರಂತೆ ಹರಿಯಾಣದ ಗುರುಗ್ರಾಮದಲ್ಲೇ ಇನ್ನೂಕೆಲ ದಿನ 90ಕ್ಕೂ ಹೆಚ್ಚು ಶಾಸಕರ ವಾಸ್ತವ್ಯ ಮುಂದು ವರಿಯುವ ಸಾಧ್ಯತೆ ಇದೆ. ಜ.18ಕ್ಕೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯಾಬಲದ ಬಗ್ಗೆ ಸ್ಪಷ್ಟತೆ ಮೂಡಲಿದ್ದು, ಆನಂತರ ಮುಂದಿನ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದೆ. ಆದರೆ ಮತ್ತೂಂದು ಗುಂಪಿನ ನಾಯಕರು ಪಕ್ಷದ ಪ್ರಯತ್ನ ವಿಫ‌ಲವಾಗಿರುವುದನ್ನು ಅಳುಕಿನಿಂದಲೇ ಒಪ್ಪಿಕೊಳ್ಳುತ್ತಿದ್ದು, ಪಕ್ಷ ಕಳೆದುಕೊಂಡಿದ್ದು ಏನೂ ಇಲ್ಲ ಎಂದು ಸಮರ್ಥನೆ ನೀಡಲಾರಂಭಿಸಿದ್ದಾರೆ. ಒಟ್ಟಾರೆ ನಾಲ್ಕೈದು ದಿನಗಳ ಬೆಳವಣಿಗೆಯಲ್ಲಿ ಬುಧವಾರ ಬಿಜೆಪಿಯ ಪ್ರಯತ್ನಕ್ಕೆ ತೀವ್ರ ಹಿನ್ನಡೆ ಉಂಟಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

Advertisement

ಪಕ್ಷದ ಲೆಕ್ಕಾಚಾರದಲ್ಲಿ ತುಸು ವ್ಯತ್ಯಯವಾಗಿರಬಹುದು. ಹಾಗೆಂದು ಆಶಾಭಾವನೆ ಕಳೆದುಕೊಂಡಿಲ್ಲ. ಸದ್ಯದ ಬೆಳವಣಿಗೆ ಆಧರಿಸಿ ಕಾದು ನೋಡುವ ತಂತ್ರ ಅನುಸರಿಸಲಾಗುವುದು. ಎಲ್ಲ ರಾಜಕೀಯ ಬೆಳವಣಿಗೆಯನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ, ನಮ್ಮ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್‌, ಜೆಡಿಎಸ್‌ ಬಿಟ್ಟಿವೆ ಎಂಬುದು ಖಾತರಿಯಾದ ಬಳಿಕ ಬಿಜೆಪಿ ಶಾಸಕರು ಕ್ಷೇತ್ರಗಳಿಗೆ ತೆರಳಲಿದ್ದಾರೆ. ಸದ್ಯ ಕೆಲ ದಿನದ ಮಟ್ಟಿಗೆ ಗುರುಗ್ರಾಮದಲ್ಲೇ ವಾಸ್ತವ್ಯ ಮುಂದುವರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ಕಾಂಗ್ರೆಸ್‌ ಸಭೆ ನಿರೀಕ್ಷೆ: ಈ ಬೆಳವಣಿಗೆಯಿಂದ ಮೈತ್ರಿ ಸರ್ಕಾರದ ಬಹಳಷ್ಟು ಶಾಸಕರಿಗೆ ಸಮಾಧಾನವಿಲ್ಲ ಎಂಬುದು ಬಹಿರಂಗವಾಗಿದೆ. ಅತೃಪ್ತಿ ಶಮನಕ್ಕಾಗಿ ಸಚಿವ ಸ್ಥಾನ, ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕಲ್ಪಿಸುವ ಮಾತುಗಳನ್ನು ಕಾಂಗ್ರೆಸ್‌ ನಾಯಕರು ಆಡುತ್ತಿದ್ದಾರೆ. ಅತೃಪ್ತರ ಮನವಿಗೆ ಕಾಂಗ್ರೆಸ್‌ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಲಾಗುವುದು. ಜ.18ಕ್ಕೆ ಕಾಂಗ್ರೆಸ್‌ ಶಾಸಕಾಂಗ ಸಭೆ ಕರೆದಿದ್ದು, ಆ ಪಕ್ಷಕ್ಕೆ ನಿಷ್ಠರಾಗಿರುವ ಶಾಸಕರ ನಿಖರ ಸಂಖ್ಯೆ ಗೊತ್ತಾಗಲಿದೆ. ಅದನ್ನು ಆಧರಿಸಿ ಮುಂದಿನ ಕಾರ್ಯತಂತ್ರ ಹೆಣೆಯುವ ಸಾಧ್ಯತೆಯಿದೆ.

ಕಳೆದುಕೊಂಡಿದ್ದೇನು ಇಲ್ಲ: ಆಡಳಿತ ಪಕ್ಷದಲ್ಲಿ ಅತೃಪ್ತಿ, ಭಿನ್ನಮತವಿದ್ದಾಗ ಅದರ ಲಾಭ ಪಡೆಯಲು, ಅವಕಾಶ ಸಿಕ್ಕರೆ ಸರ್ಕಾರ ರಚಿಸಲು ಪ್ರತಿಪಕ್ಷ ಪ್ರಯತ್ನಿಸುವುದು ಸಹಜ. ಅದರಲ್ಲೂ ಅತಿ ಹೆಚ್ಚು ಶಾಸಕ ಬಲಹೊಂದಿರುವಬಿಜೆಪಿ ಅವಕಾಶ ಸಿಕ್ಕರೆ ಸರ್ಕಾರ ರಚಿಸುವುದರಲ್ಲಿ ತಪ್ಪಿಲ್ಲ. ಅದರಂತೆ ಪ್ರಯತ್ನ ನಡೆಸಿದೆ. ಇದರಲ್ಲಿ ಸೋಲು- ಗೆಲುವು, ಹಿನ್ನಡೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಏಕೆಂದರೆ ಬಿಜೆಪಿ ಏನನ್ನೂ ಕಳೆದುಕೊಂಡಿಲ್ಲ ಎಂದು ಮತ್ತೂಬ್ಬ ನಾಯಕರು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಅತಿ ಹೆಚ್ಚು ಶಾಸಕ ಬಲವಿರುವುದರಿಂದ ಸರ್ಕಾರ ರಚನೆಗೆ ಹೆಚ್ಚಿನ ಅರ್ಹತೆ ಇರುವುದು ಬಿಜೆಪಿಗೆ. ಅದರ ಆಧಾರದ ಮೇಲೆಯೇ ಕೆಲ ನಾಯಕರು ಮುಖ್ಯಮಂತ್ರಿಯಾಗುವ ಜತೆಗೆ ಪಕ್ಷದ ಶಾಸಕರಿಗೂ ಸಚಿವ ಸ್ಥಾನ ಸಿಗುವ ಉದ್ದೇಶದಿಂದ ಈ ಪ್ರಯತ್ನ ನಡೆಸಿರಬಹುದು. ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಹಿರಿಯ ಮುಖಂಡರೊಬ್ಬರು ಸಮರ್ಥನೆ ನೀಡಿದರು.

Advertisement

ಒಟ್ಟಾರೆ ಪಕ್ಷದ ಪ್ರಯತ್ನಕ್ಕೆ ಉಂಟಾದ ಹಿನ್ನಡೆ ಬಗ್ಗೆ ತುಸು ಕಸಿವಿಸಿ ಉಂಟು ಮಾಡಿದ್ದರೂ ಆಶಾ ಭಾವನೆ ಕುಗ್ಗಿಲ್ಲ. ರಾಜಕೀಯ ಬೆಳವಣಿಗೆ ಆಧರಿಸಿ ಮುಂದಿನ ದಾಳ ಉರುಳಿಸಲು ಬಿಜೆಪಿ ಸಿದ್ಧತೆ ನೆಡಸಿದೆ.

ಸಿಹಿ ಸುದ್ದಿ ಸಿಗಲಿಲ್ಲ
ಪಕ್ಷೇತರ ಶಾಸಕರು ಬಿಜೆಪಿ ಬೆಂಬಲಿಸಿರುವ ವಿಚಾರವನ್ನು ಮಂಗಳವಾರ ಪ್ರಕಟಿಸಿ ಮತ್ತೂಂದು ಸಿಹಿ ಸುದ್ದಿಯನ್ನು ಸದ್ಯದಲ್ಲೇ ನೀಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಆದರೆ ಬುಧವಾರ ಆ ರೀತಿಯ ಆಶಾದಾಯಕ ವಿಚಾರವನ್ನೇನೂ ಅವರು ಪ್ರಸ್ತಾಪಿಸಲಿಲ್ಲ ಎನ್ನಲಾಗಿದೆ. ತುಮಕೂರಿಗೆ ತೆರಳಿ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ವಿ.ಸೋಮಣ್ಣ ಬುಧವಾರ ಬೆಳಗ್ಗೆ ಗುರುಗ್ರಾಮಕ್ಕೆ ಹಿಂತಿರುಗಿದರು. ಸಂಜೆ ಹೊತ್ತಿಗೆ ಬಿ.ಎಸ್‌. ಯಡಿಯೂರಪ ³ ಅವರು ರೆಸಾರ್ಟ್‌ ನಿಂದ ದೆಹಲಿಗೆ ತೆರಳಿ ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು ಎನ್ನಲಾಗಿದೆ.

ಹಿನ್ನಡೆಗೆ ಕಾರಣ?
ಕಾಂಗ್ರೆಸ್‌ನಿಂದ ಬಿಜೆಪಿಗೆ ಬರುವ ನಿರೀಕ್ಷೆಯಲ್ಲಿದ್ದವರಲ್ಲಿ ಬಹಳಷ್ಟು ಮಂದಿ ಕಳೆದಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಲ್ಲಿ ಜಯ ಗಳಿಸಿದವರಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌, ಜೆಡಿಎಸ್‌ ಹೋರಾಟದ ಮುಂದೆ ಗೆಲ್ಲಬಹುದೇ ಎಂಬ ಅನುಮಾನ ಕಾಡಿದೆ.

ಜತೆಗೆ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿಯುವಂತೆ ಮಾಡುವುದಾಗಿ ಹೇಳಿದ್ದ ಬಿಜೆಪಿ ನಾಯಕರು ಅಷ್ಟು ಸಂಖ್ಯೆಯ ಶಾಸಕರು ಜತೆಗಿರುವ ಬಗ್ಗೆ ಸಾಬೀತು ಸಹ ಮಾಡಲಿಲ್ಲ. ಹೀಗಾಗಿ, ಬರಲು ಮುಂದಾಗಿದ್ದವರು ಹಿಂದೇಟು ಹಾಕಿದರು ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ. ಜತೆಗೆ ರಾಜ್ಯ ಬಿಜೆಪಿ ನಾಯಕರು ಆಪರೇಷನ್‌ ಕಮಲ ವಿಚಾರದಲ್ಲಿ ಪೂರ್ವ ತಯಾರಿ ಮಾಡಿಕೊಳ್ಳುವಲ್ಲಿಯೂ ಎಡವಿದರು. ಮತ್ತಷ್ಟು ಎಚ್ಚರಿಕೆ ಹಾಗೂ ಖಚಿತತೆ ಪಡಿಸಿಕೊಳ್ಳಬೇಕಿತ್ತು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next