Advertisement

ಬಿರುಗಾಳಿ-ಮಳೆಗೆ ಅಪಾರ ಹಾನಿ: ಅಧಿಕಾರಿಗಳ ಪರಿಶೀಲನೆ

01:34 PM Apr 22, 2020 | Naveen |

ವಡಗೇರಾ: ಸೋಮವಾರ ಸಂಜೆ ಬೀಸಿದ ಬಿರುಗಾಳಿಗೆ ಬಡವರ ಆಶ್ರಯ ಮನೆಗಳ ಸೀಟುಗಳು ಕಿತ್ತು ಹೋರುವ ಘಟನೆ ನಡೆದಿದೆ. ಅಕಾಲಿಕ ಗಾಳಿ ಮಳೆಗೆ ದನದ ಕೊಟ್ಟಿಗೆಳು ನೆಲಸಮವಾಗಿವೆ.

Advertisement

ಮದರಕಲ್‌ ಗ್ರಾಮದ ಅಂಬೋಜಿ ಹವಾಲ್ದಾರ್‌ ಎನ್ನುವವರ ಮನೆಗೆ ಹೆಚ್ಚು ಹಾನಿಯಾಗಿದೆ. ಸಂಗಣ್ಣಗೌಡರ ಮನೆ ಛಾವಣಿ ಕಿತ್ತು ಹೋಗಿದ್ದು, ಒಟ್ಟು ಮೂರು ಮನೆಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. 10ರಿಂದ 11 ಬೃಹತ್‌ ಮರಗಳು ನೆಲಕ್ಕುರುಳಿದ್ದು, ಒಂದು ವಿದ್ಯುತ್‌ ಕಂಬ ಬಿದ್ದು ಹೋಗಿದೆ. ವಿದ್ಯುತ್‌ ಸಂಪರ್ಕ ಕಡಿತವಾಗಿದ್ದರಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ.

ಹಾನಿಯಾದ ಸ್ಥಳಕ್ಕೆ ಕಂದಾಯ ನಿರೀಕ್ಷಕ ಬಸಯ್ಯ ಸ್ವಾಮಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪ್ರವೀಣಕುಮಾರ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ.
ಗಾಳಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next