Advertisement

ಟಿ ಟ್ವೆಂಟಿ ವಿಶ್ವಕಪ್ ತಂಡದಲ್ಲಿ ಇವರಿಬ್ಬರಿಗೆ ಜಾಗವಿಲ್ಲ: ಲಕ್ಷ್ಮಣ್ ಹೀಗೆ ಹೇಳಿದ್ಯಾಕೆ?

10:09 AM Jan 10, 2020 | keerthan |

ಇಂಧೋರ್: ಟಿ ಟ್ವೆಂಟಿ ವಿಶ್ವಕಪ್ ಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆ ತಂಡ ಕಟ್ಟುವ ಕೆಲಸ ಆರಂಭವಾಗಿದೆ. ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ತನ್ನ 15 ಜನರ ತಂಡ ಪ್ರಕಟಿಸಿದ್ದು, ಅಚ್ಚರಿಯ ಆಯ್ಕೆ ಮಾಡಿದ್ದಾರೆ.

Advertisement

ಲಂಕಾ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯದ ನಂತರ ಅಧಿಕೃತ ನೇರಪ್ರಸಾರದ ವಾಹಿನಿಯೊಂದಿಗೆ ಮಾತನಾಡುತ್ತಾ ಲಕ್ಷ್ಮಣ್ ತನ್ನ ತಂಡ ಪ್ರಕಟಿಸಿದರು.

ವಿವಿಎಸ್ ಪ್ರಕಟಿಸಿದ ತಂಡದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಆರಂಭಿಕ ಆಟಗಾರ ಶಿಖರ್ ಧವನ್ ಗೆ ಜಾಗವಿಲ್ಲ.  ಅವರಿಬ್ಬರ ಜಾಗದಲ್ಲಿ ಕ್ರಮವಾಗಿ ರಿಷಭ್ ಪಂತ್ ಮತ್ತು ಕೆ ಎಲ್ ರಾಹುಲ್ ವಿಶ್ವಕಪ್ ಆಡಲಿದ್ದಾರೆ.

ಮಹೇಂದ್ರ ಸಿಂಗ್ ಕೆಲ ತಿಂಗಳುಗಳಿಂದ ಭಾರತ ತಂಡದಿಂದ ಹೊರಗಿದ್ದಾರೆ. ಏಕದಿನ ವಿಶ್ವಕಪ್ ಬಳಿಕ ಧೋನಿ ವಿಶ್ರಾಂತಿಯಲ್ಲಿದ್ದಾರೆ. ಕಳಪೆ ಫಾರ್ಮಿನಲ್ಲಿದ್ದ ಶಿಖರ್ ಧವನ್ ಗಾಯಾಳಾಗಿ ತಂಡದಿಂದ ಹೊರಬಿದ್ದಿದ್ದರು. ಅವರ ಜಾಗಕ್ಕೆ ಆಗಮಿಸಿದ್ದ ಕೆ ಎಲ್ ರಾಹುಲ್ ಉತ್ತಮ ಪ್ರದರ್ಶನದಿಂದ ಜಾಗ ಗಟ್ಟಿ ಮಾಡಿಕೊಂಡಿದ್ದಾರೆ.

ವಿವಿಎಸ್ ಲಕ್ಷ್ಮಣ್ ತಂಡ

Advertisement

ವಿರಾಟ್ ಕೊಹ್ಲಿ( ನಾ), ರೋಹಿತ್ ಶರ್ಮಾ, ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಶಿವಂ ದುಬೆ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next