Advertisement

ವಿಸ್ಡನ್‌ ಕ್ರಿಕೆಟಿಗರ ಪ್ರಶಸ್ತಿ ಬಗ್ಗೆ ವಿವಿಎಸ್‌ ಬೇಸರ

08:48 PM Apr 12, 2020 | Sriram |

ಮುಂಬಯಿ: ಕಳೆದ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ 5 ಶತಕ ಬಾರಿಸಿದ್ದ ಭಾರತ ಕ್ರಿಕೆಟ್‌ ತಂಡದ ರೋಹಿತ್‌ ಶರ್ಮ ಅವರಿಗೆ 2019ರ ವಿಸ್ಡನ್‌ನ ಐವರು ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ನೀಡದ ಬಗ್ಗೆ ನಿಜಕ್ಕೂ ಆಶ್ಚರ್ಯ ಉಂಟಾಗಿದೆ ಎಂದು ಮಾಜಿ ಆಟಗಾರ ವಿವಿಎಸ್‌ ಲಕ್ಷ್ಮಣ್‌ ಹೇಳಿದ್ದಾರೆ.

Advertisement

ವಿಸ್ಡನ್‌ ಕ್ರಿಕೆಟಿಗರ ಪಟ್ಟಿಯಲ್ಲಿ ರೋಹಿತ್‌ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಸ್ಟಾರ್‌ ನ್ಪೋರ್ಟ್ಸ್ ಜತೆ ಮಾತನಾಡಿದ ಲಕ್ಷ್ಮಣ್‌, ರೋಹಿತ್‌ ಅವರನ್ನು ವಿಸ್ಡನ್‌ ವರ್ಷದ ಐವರ ಪಟ್ಟಿಗೆ ಸೇರಿಸದ ಬಗ್ಗೆ ಕ್ರಿಕೆಟ್‌ ಕ್ರೀಡೆಯನ್ನು ಹಿಂಬಾಲಿಸುತ್ತಿರುವ ಪ್ರತಿಯೊಬ್ಬರಿಗೂ ಆಶ್ಚರ್ಯ ಹಾಗೂ ಆಘಾತ ಉಂಟಾಗಿದೆ ಎಂದು ಭಾವಿಸುತ್ತೇನೆ. ಭಾರತದ ಆಟಗಾರನನ್ನು ವಿಸ್ಡನ್‌ ಪಟ್ಟಿಯಿಂದ ಕೈಬಿಟ್ಟಿರುವುದು ನಿಜಕ್ಕೂ ಶಾಕ್‌ ಕೊಟ್ಟಂತಿದೆ ಎಂದು ಲಕ್ಷ್ಮಣ್‌ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next