Advertisement

ತೋಡಾರು ಯೆನೆಪೋಯ: ವಿಟಿಯು ಕಬಡ್ಡಿ

01:41 PM Apr 26, 2017 | Karthik A |

ಮೂಡಬಿದಿರೆ: ಮಿಜಾರ್‌ ತೋಡಾರ್‌ನ ಯೆನೆಪೋಯ ಎಂಜಿನಿಯರಿಂಗ್‌ ಕಾಲೇಜ್‌ ಮೈದಾನದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಬೆಳಗಾವಿ ಮತ್ತು ಯೆನೆಪೋಯ ಎಂಜಿನಿಯರಿಂಗ್‌ ಕಾಲೇಜಿನ ಸಹಭಾಗಿತ್ವದಲ್ಲಿ 2 ದಿನ ನಡೆಯುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ್‌ವಲಯ ಮಹಿಳೆಯರು ಹಾಗೂ ಪುರುಷರ ಮತ್ತು ಮಂಗಳೂರು ವಲಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾಟವನ್ನು ಯೆನೆಪೋಯ ಗ್ರೂಪ್‌ ನಿರ್ದೇಶಕ ಯೆನೆಪೋಯ ಅಬ್ದುಲ್ಲಾ ಜಾವೇದ್‌ ಉದ್ಘಾಟಿಸಿದರು.

Advertisement

ಯೆನೆಪೋಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ| ಆರ್‌.ಜಿ. ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಪಂದ್ಯಾಟದ ನಿರ್ದೇಶಕ, ಕಾಲೇಜಿನ ಆಡಳಿತಾಧಿಕಾರಿ ಅಶೋಕ್‌ ಶೆಟ್ಟಿ ಅತಿಥಿಗಳಿಗೆ ಕ್ರೀಡಾಪಟುಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಪ್ರಜ್ಞಾ ಉಪಾಧ್ಯ ನಿರೂಪಿಸಿದರು. ದೈಹಿಕ ಶಿಕ್ಷಣ ನಿದೇರ್ಶಕ ಲೋಕೇಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next