Advertisement

ನಿರ್ಭಯಾ ಪ್ರಕರಣದಲ್ಲಿ ಬಾಯಿ ಬಡಿದುಕೊಳ್ಳುತ್ತಿದ್ದ ಬಿಜೆಪಿ ಮನೀಷಾ ಪ್ರಕರಣದಲ್ಲಿ ಮೌನ ಯಾಕೆ?

04:42 PM Oct 07, 2020 | sudhir |

ಬಳ್ಳಾರಿ: ಉತ್ತರ ಪ್ರದೇಶದ ದಲಿತ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರ, ಹತ್ಯೆ ಘಟನೆಗೆ ಖಂಡನೆ- ವಾಲ್ಮೀಕಿ ಸಮಯದಾಯದ ಸ್ವಾಭೀಮಾನಿ ಶ್ರೀ ರಾಮುಲು ಯಾಕೆ ಮಾತನಾಡ್ತಿಲ್ಲಾ- ರಮೇಶ್ ಜಾರಕಿಹೊಳಿ ಯಾಕೆ ಮಾತನಾಡುತ್ತಿಲ್ಲಾ. ಯಾರು ಮಾತನಾಡದೇ ಇದ್ರೂ ಶ್ರೀ ರಾಮುಲು, ರಮೇಶ್ ಜಾರಕಿಹೊಳಿ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಮಾತನಾಡಿಲ್ಲಾ ಯಾಕೆ ಎಂದು ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.

Advertisement

ನಿರ್ಭಯಾ ಪ್ರಕರಣದಲ್ಲಿ ಬಾಯಿ‌ ಬಡಿದುಕೊಳ್ಳುತಿದ್ದ ಬಿಜೆಪಿಯವರು ಮನೀಷಾ ಪ್ರಕರಣದಲ್ಲಿ ಮೌನ ವಹಿಸುತ್ತಿರುವುದು ಏಕೆ ? ರಾಜ್ಯದ ಸಿಎಂ ಯಡಿಯೂರಪ್ಪ RTGS ಮೂಲಕ ಲಂಚ ಪಡೆಯುತ್ತಿದ್ದಾರೆ. ಈ ಹಿಂದೆ ಚೆಕ್ ಮೂಲಕ ಪಡೆದಿದ್ದರು. ಸಾವಿರಾರು ಕೋಟಿ ರೂ.ಗಳನ್ನು ಕಿಕ್ ಬ್ಯಾಕ್ ಪಡೆದು ಸಿಎಂ ಯಡಿಯೂರಪ್ಪ ಅವರು ಭೂಸುಧಾರಣೆ, ಎಪಿಎಂಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದ್ದಾರೆ.

ಇದನ್ನೂ ಓದಿ:ಮಾಸ್ಕ್ ದಂಡ ಹೆಚ್ಚಳ ಮಾಡಿರುವುದು ಸರ್ಕಾರದ ಅಧಿಕ ಪ್ರಸಂಗತನ: ಬಸವರಾಜ ಹೊರಟ್ಟಿ ಆಕ್ರೋಶ

KPCC ಅಧ್ಯಕ್ಷ ಡಿಕೆ. ಶಿವಕುಮಾರ್ ಅವರ ಮನೆ ಮೇಲೆ CBI ದಾಳಿ ಖಂಡನೀಯ- ಉಪ ಚುನಾವಣೆ ಸಮಯದಲ್ಲಿ ಈ ದಾಳಿ ಸರಿಯಲ್ಲಾ. ಕೋವಿಡ್ ವಿಚಾರದಲ್ಲೂ ಭ್ರಷ್ಟಾಚಾರ ನಡೆದಿದೆ ಎಂದು ಉಗ್ರಪ್ಪ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next