Advertisement

ಮತದಾನಂ ಸರ್ವದಾನ ಪ್ರಧಾನಂ: ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು

05:48 PM May 10, 2023 | Team Udayavani |

ಉಡುಪಿ : ಎಲ್ಲಾ ದಾನಗಳಲ್ಲಿ ಅತ್ಯಂತ ಶ್ರೇಷ್ಠ ದಾನ ಮತದಾನ. ನಮ್ಮ ದೇಶದ ರಕ್ಷಣೆಗೆ ಇರತಕ್ಕ ಜವಾಬ್ಧಾರಿಯನ್ನು ನಿರ್ವಹಿಸತಕ್ಕಂತಹ ಈ ಒಂದು ದಾನ ಅತ್ಯಂತ ಶ್ರೇಷ್ಠವಾದದ್ದು ಎಂದು ಉಡುಪಿ ಶ್ರೀಕೃಷ್ಣ ಮಠದ ಭಾವಿ ಪರ್ಯಾಯ ಮಠಾಧೀಶರಾದ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಶ್ರೀಪಾದರು ಉಡುಪಿಯ ಪಣಿಯಾಡಿ ಶ್ರೀ ಅನಂತೇಶ್ವರ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿ ಮಾತನಾಡಿ, ನನ್ನ ಒಂದು ಓಟಿನಿಂದ ಏನಾಗುತ್ತದೆ ಎಂಬ ಭಾವನೆ ಸರಿಯಲ್ಲ ಅದೇರೀತಿ ಯಾರೂ ಒಳ್ಳೆಯವರಿಲ್ಲ ಅದರಿಂದ ನಾವು ಓಟು ಹಾಕುದಿಲ್ಲ ಎನ್ನುವ ಭಾವನೆಯೂ ಸರಿಯಲ್ಲ ಎಂದರು.

ಇದ್ದದರಲ್ಲಿ ಒಳ್ಳೆಯವರನ್ನು ಆಯ್ಕೆಮಾಡುವುದು ದೇಶದ ಹಿತರಕ್ಷಣೆಗೆ ಮಾಡುವ ಎಲ್ಲರ ಕರ್ತವ್ಯ ವಾಗಿದೆ. ಈ ದೃಷ್ಟಿಯಲ್ಲಿ ಪ್ರತಿಯೊಬ್ಬರೂ ಕೂಡ ಈ ಮತಾದಾನದ ಜವಾಬ್ಧಾರಿಯನ್ನು ಪೂರ್ಣಗೊಳಿಸುವ ಮೂಲಕ ದೇಶದ ರಕ್ಷಣೆ ದೇಶದ ಸಂಸ್ಕೃತಿಗೆ ಕಾರಣರಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next