Advertisement

ಮತದಾರರ ಭೇಟಿಯಾದ ಕೆಪಿಸಿಸಿ ಉಸ್ತುವಾರಿ

12:55 PM Oct 17, 2017 | Team Udayavani |

ಧಾರವಾಡ: ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ-74ರ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ ನಂ.12ರ ವ್ಯಾಪ್ತಿಯ ಬೂತ್‌ ನಂ.20ರ ಕೊಂಡವಾಡ ಓಣಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹತ್ತಾರು ಮನೆಗಳಿಗೆ ತೆರಳಿ ಜನಸಾಮಾನ್ಯರೊಂದಿಗೆ ಕುಳಿತು ಮಾತನಾಡಿದರು.

Advertisement

ಸರ್ಕಾರದ ಸಾಧನೆಗಳು ತಲುಪಿವಿಯೇ ಎಂದು ಪ್ರಶ್ನಿಸಿದರು. ಅಲ್ಲದೆ, ಕಾಂಗ್ರೆಸ್‌ ಪಕ್ಷದ ನಾಯಕರು, ಬೂತ್‌ ಮಟ್ಟದ ಕಾರ್ಯಕರ್ತರು ಆಗಮಿಸಿ ನಿಮಗೆ ರಾಜ್ಯ ಸರ್ಕಾರದ ಸಾಧನೆ ಪುಸ್ತಕ ವಿತರಿಸಿದ್ದಾರೆಯೇ ಎಂದು ಕೇಳಿ ಮಾಹಿತಿ ಸಂಗ್ರಹಿಸಿದರು. 

ಬಳಿಕ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ನಾಯಕ ದೀಪಕ ಚಿಂಚೋರೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬುರಾನ್‌ ಗವಳಿ, ಮರಿಗೌಡ ಪಾಟೀಲ ಹಾಗೂ ಬೂತ್‌ ಕಮಿಟಿ ಅಧ್ಯಕ್ಷ ಸುನೀಲ ಹೊಂಗಲ್‌ ಅವರ ತಂಡದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿ ಸಕ್ರಿಯವಾಗಿ ಪಕ್ಷದ ಕೆಲಸ ಕಾರ್ಯಗಳಲ್ಲಿ ತೊಡಗುವಂತೆ ಸಲಹೆ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‌ ವೀಕ್ಷಕ ಮಾಣಿಕ್ಯಂ ಠ್ಯಾಗೂರ್‌, ಸಚಿವ ವಿನಯ ಕುಲಕರ್ಣಿ, ಕೆಪಿಸಿಸಿ ಕಾರ್ಯದರ್ಶಿಗಳಾದ ವೀರ ಕುಮಾರ ಪಾಟೀಲ, ಚಾಂದಪಾಷ, ಸುನೀಲಕುಮಾರ, ಚಂದ್ರಶೇಖರ, ಬಾನು, ಉಪಾಧ್ಯಕ್ಷ ಎ.ಎಂ. ಹಿಂಡಸಗೇರಿ, ವಿಧಾನ ಪರಿಷತ್‌ ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ, ಹಾಲಿ ಸದಸ್ಯ ಶ್ರೀನಿವಾಸ ಮಾನೆ, 

-ಕಾಂಗ್ರೆಸ್‌ ಮುಖಂಡರಾದ ದೀಪಕ ಚಿಂಚೋರೆ, ಕೆಪಿಸಿಸಿ ಸದಸ್ಯರಾದ ರಾಬರ್ಟ ದದ್ದಾಪುರಿ, ಪ್ರಕಾಶ ಘಾಟಗೆ, ಹಜರತ್‌ ಅಲಿ ಗೊರವನಕೊಳ್ಳ, ರಾಣಿ ಚನ್ನಮ್ಮ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬುರಾನ್‌ ಗವಳಿ, ನವನಗರ ಬ್ಲಾಕ್‌ ಅಧ್ಯಕ್ಷ ಮರಿಗೌಡ ಪಾಟೀಲ, ಮಾಜಿ ಸಚಿವ ಎಸ್‌.ಆರ್‌ ಮೊರೆ, ಇಸ್ಮಾಯಿಲ್‌ ತಮಟಗಾರ, ಸ್ವಾತಿ ಮಳಗಿ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next