Advertisement

ಕುಮಟಳ್ಳಿಗೆ ಮತದಾರರ ಸವಾಲ್‌

11:08 PM Jul 24, 2019 | Team Udayavani |

ಬೆಳಗಾವಿ: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದ ಅಥಣಿ ಶಾಸಕ ಮಹೇಶ ಕುಮಟಳ್ಳಿ ವಿರುದ್ಧ ಕ್ಷೇತ್ರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಥಣಿ ಕ್ಷೇತ್ರದ ಮತದಾರರು ಕುಮಟಳ್ಳಿ ಅವರಿಗೆ ಮತ್ತೂಮ್ಮೆ ಗೆದ್ದು ಶಾಸಕರಾಗಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುವದರ ಮೂಲಕ ಸವಾಲು ಹಾಕಿದ್ದಾರೆ.

Advertisement

ಅಲ್ಲದೇ ಶಾಸಕರ ನಡೆಯ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಪ್ರಾರಂಭದಿಂದ ಅತೃಪ್ತ ಶಾಸಕರ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಾ, ರಮೇಶ ಜಾರಕಿಹೊಳಿ ಅವರಿಗೆ ಬೆಂಬಲ ನೀಡುತ್ತಲೆ ಬಂದಿದ್ದ ಕುಮಟಳ್ಳಿ ಸರ್ಕಾರದ ಪತನಕ್ಕೆ ಕಾರಣರಾಗುವ ಮೂಲಕ ಕ್ಷೇತ್ರದ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next