Advertisement

“ದೇಶ ಕಟ್ಟುವ ಕಾಯಕನಿರತ ಬಿಜೆಪಿಗೆ ಯುವ ಜನತೆಯ ಮತ ‘

07:15 AM May 07, 2018 | Team Udayavani |

ಕಟಪಾಡಿ: ಎಲ್ಲೆಡೆಗಳಲ್ಲಿಯೂ ಯುವಜನಾಂಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ವಿಧಾನಸಭಾ ಚುನಾವಣೆಯಲ್ಲ, ಬಿಜೆಪಿಯು ಪರಿಶ್ರಮದ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಆಗುತ್ತಿದೆ. ಆ ಶ್ರಮಕ್ಕೆ ಬೆಂಬಲ ಕೊಡುವುದಾಗಿ ಭಾವಿಸಿ ಯುವ ಜನಾಂಗ ಬಿಜೆಪಿ ಕಡೆ ಆಕರ್ಷಿತರಾಗುವುದನ್ನು ನಾವು ಕಾಣುತ್ತಿದ್ದೇವೆ ಎಂದು ರಾಜ್ಯ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ  ಪೂಜಾರಿ ಹೇಳಿದರು.

Advertisement

ಅವರು  ಕಾಪು  ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಟಪಾಡಿ, ಕೋಟೆ, ಉದ್ಯಾವರ ಗ್ರಾ. ಪಂ.  ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಲಾಲಾಜಿ ಮೆಂಡನ್‌ ಪರ ಬಿರುಸಿನ ಮತಯಾಚನೆ ನಡೆಸಿ ಮಾತನಾಡಿದರು.

ಕಾಪು ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ, ಜಿ.ಪಂ.  ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಪಕ್ಷದ ಪ್ರಮುಖರಾದ ಸಂದೀಪ್‌ ಶೆಟ್ಟಿ ಕಲ್ಯ, ಕಿರಣ್‌ ಆಳ್ವ, ಅನಿಲ್‌ ಕುಮಾರ್‌, ಸಂತೋಷ್‌ ಪೂಜಾರಿ ಉದ್ಯಾವರ, ರತ್ನಾಕರ ಕೋಟೆ, ಸರೋಜಿನಿ ಶೆಟ್ಟಿ, ಪವಿತ್ರಾ ಶೆಟ್ಟಿ, ಪ್ರವೀಣ್‌, ಕರುಣಾಕರ ಪೂಜಾರಿ, ನಿತಿನ್‌ ವಿ. ಸೇರಿಗಾರ್‌, ಗೋಪಾಲಕೃಷ್ಣ ರಾವ್‌, ರವಿ ಸುವರ್ಣ, ಶರತ್‌ ಕೋಟೆ, ಊವಯ್ಯ ಪಾಣಾರ, ರಾಮ ಪಾಣಾರ, ಭಾಸ್ಕರ್‌ ಶೆಟ್ಟಿಗಾರ್‌, ನವೀನ್‌ ಮೆಂಡನ್‌, ಸುಮಾ ಯು. ಶೆಟ್ಟಿ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next