Advertisement

ನಿಲ್ದಾಣದಲ್ಲೇ ಠಿಕಾಣಿ ಹೂಡಿ ಕರೆತರುವ ಸ್ವಯಂಸೇವಕರು

10:34 AM Nov 24, 2017 | Team Udayavani |

ಉಡುಪಿ: ಉಡುಪಿಯಲ್ಲಿ ಸಂತರಿಗೆ ನೀಡುವ ಆತಿಥ್ಯ ಗಮನಸೆಳೆಯುತ್ತಿದೆ. ಅವರು ಇಳಿಯುವ ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್‌ ನಿಲ್ದಾಣದಿಂದ ವಾಹನದಲ್ಲಿ ಕರೆತಂದು ಅವರ ವಾಸ್ತವ್ಯಕ್ಕೆ ನಿಗದಿಪಡಿಸಿದ ಸ್ಥಳ, ಧರ್ಮಸಂಸದ್‌ ಸಭಾಂಗಣ ಹೀಗೆ ವಿವಿಧೆಡೆಗೆ ತಲುಪಿಸುವ ವ್ಯವಸ್ಥೆ ಕ್ರಮಬದ್ಧವಾಗಿ ನಡೆಯುತ್ತಿದೆ.

Advertisement

ಗುರುವಾರ ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಮೊದಲಾದೆಡೆಗಳಿಂದ ರೈಲಿನಲ್ಲಿ ಆಗಮಿಸಿದ ನೂರಾರು ಮಂದಿ ಸಂತರನ್ನು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಕರೆತರಲಾಯಿತು. ನಿಲ್ದಾಣದಲ್ಲಿ ಕಳೆದೆರಡು ದಿನಗಳಿಂದ ಸಣ್ಣ ಪೆಂಡಾಲ್‌ ಹಾಕಿ ಕಾದು ಕುಳಿತಿರುವ ಕಾರ್ಯಕರ್ತರು ರೈಲು ಬಂದು ನಿಂತ ಕೂಡಲೇ “ಧರ್ಮ ಸಂಸದ್‌’ ಎಂಬ ಫ‌ಲಕವನ್ನು ಎತ್ತಿ ಹಿಡಿಯುತ್ತಾರೆ. ಇದು ಸಂತರು ಧರ್ಮಸಂಸದ್‌ ತಂಡವನ್ನು ಸೇರಲು ಸಹಕಾರಿಯಾಗುತ್ತಿದೆ. ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ಸಂತರನ್ನು ಕೂಡ ಸ್ವಯಂಸೇವಕರು ಉಡುಪಿಗೆ ಕರೆತಂದರು. 

Advertisement

Udayavani is now on Telegram. Click here to join our channel and stay updated with the latest news.

Next