Advertisement

ವಿವೇಕಾನಂದ ಜಯಂತಿ ಆಚರಣೆ

07:02 PM Jan 17, 2020 | Suhan S |

ಪುಣೆ, ಜ. 16: ಪುಣೆ ಯುವ ಬ್ರಿಗೇಡ್‌ ಪುಣೆ ತಂಡದಿಂದ ಜ. 12 ರಂದು ಚಿಂಚಾÌಡ್‌ ನಗರದ ಆದಿತ್ಯ ಬಿರ್ಲಾ ಆಸ್ಪತ್ರೆಯ ಪಕ್ಕದಲ್ಲಿ ಹಾದು ಹೋಗುವ ಪಾವನಾ ನದಿಯ ದಡವನ್ನು ಸ್ವತ್ಛಗೊಳಿಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನುಆಚರಿಸಲಾಯಿತು. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್‌ ಸದಸ್ಯರಾದ ಅವಿನಾಶ್‌, ವೀರುಪಾಕ್ಷಿ, ದಿನೇಶ್‌, ನಿಂಗಪ್ಪ ಮತ್ತು ಇತರೆ ಸದಸ್ಯರುಗಳು ಹಾಜರಿದ್ದರು.

Advertisement

ಮೊದಲಿಗೆ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಪುಣೆ ಪರಿಸರದಲ್ಲಿ ಸದ್ದಿಲ್ಲದೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಕನ್ನಡಿಗ ಯುವ ಬ್ರಿಗೇಡ್‌ ಸದಸ್ಯರು ಮಾಡುತ್ತಿದ್ದು, ಈ ಹಿಂದೆಯೂ ಸಂಘಟನೆಯ ವತಿಯಿಂದ ಚಿಂಚಾಡ್‌ ನಲ್ಲಿ ಹರಿಯುವ ಪಾವನಾ ನದಿ ದಡವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡಿ ಗಮನ ಸೆಳೆದಿದ್ದರು.

ಆದಿತ್ಯ ಬಿರ್ಲಾ ಆಸ್ಪತ್ರೆಯ ಹತ್ತಿರದಿಂದ ಹರಿಯುತ್ತಿರುವ ಈ ನದಿಯನ್ನು ಸಾರ್ವಜನಿಕರು ಕಸಗಳನ್ನು ಎಸೆದು ಹಾಳು ಮಾಡುತ್ತಿರುವುದನ್ನು ಗಮಿನಿಸಿದ ಸದಸ್ಯರು ಸ್ವತ್ಛತಾ ಅಭಿಯಾನವನ್ನು ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು.

 

ವರದಿ : ಕಿರಣ್‌ ಬಿ. ರೈ ಕರ್ನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next