Advertisement

ವಿಟ್ಲ: ಹಳೆ ಬಸ್‌ ನಿಲ್ದಾಣಕ್ಕೆ ಡಾಮರು ಕಾಮಗಾರಿ

03:18 PM Dec 29, 2017 | Team Udayavani |

ವಿಟ್ಲ : ವಿಟ್ಲ ಹಳೆ ಬಸ್‌ ನಿಲ್ದಾಣಕ್ಕೆ ಗುರುವಾರ ವಿಟ್ಲ ಪ.ಪಂ.ಅನುದಾನದಲ್ಲಿ ಡಾಮರು ಕಾಮಗಾರಿ ನಡೆಸಲಾಯಿತು. ವಿಟ್ಲ ಪ.ಪಂ.ನ ಮಳೆಹಾನಿ ಯೋಜನೆಯಲ್ಲಿ ಬಿಡುಗಡೆಗೊಂಡ 4.93 ಲ.ರೂ. ಅನುದಾನದಲ್ಲಿ ಡಾಮರು ಹಾಕಲಾಗಿದೆ. ಐದು ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಮಳೆಯಿಂದಾಗಿ ನಿಲ್ದಾಣದಲ್ಲಿ ಹೊಂಡಗಳು ನಿರ್ಮಾಣವಾಗಿದ್ದರಿಂದ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದರು.

Advertisement

ಪ.ಪಂ. ಅಧ್ಯಕ್ಷ ಅರುಣ್‌ ಎಂ. ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷ ರಾಮದಾಸ್‌ ಶೆಶೆಣೈ, ಸದಸ್ಯರಾದ ಶ್ರೀಕೃಷ್ಣ, ಜಯಂತ ಹಾಗೂ ಮುಖ್ಯಾಧಿಕಾರಿ ಮಾಲಿನಿ ಅವರು ಪರಿಶೀಲಿಸಿದರು. ಬಸ್‌, ರಿಕ್ಷಾ, ಟೂರಿಸ್ಟ್‌ ಕಾರುಗಳು ಇದೇ ನಿಲ್ದಾಣದಲ್ಲಿ ತಂಗುತ್ತಿದ್ದು, ಗುರುವಾರ ಕಾಮಗಾರಿ ನಡೆಯುತ್ತಿರುವಾಗ ಅವುಗಳನ್ನು ಅನಿವಾರ್ಯವಾಗಿ  ನಿರ್ಬಂಧಿಸಲಾಗಿತ್ತು. ಪರಿಣಾಮ ವಾಹನಗಳ ಜಂಜಾಟ ತೀವ್ರವಾಗಿತ್ತು. ಪೇಟೆಯಲ್ಲಿ ಆಗಾಗ ಬ್ಲಾಕ್‌ ಆಗುತ್ತಿತ್ತು. ಮಧ್ಯಾಹ್ನ ಚಂದ್ರನಾಥ ಸ್ವಾಮಿ ಬಸದಿ ಬಳಿ ಲಾರಿಯೊಂದು ಯದ್ವಾತದ್ವಾ ನುಗ್ಗಿ ಬಂದು, ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಈ ಸಂದರ್ಭ ಬಸ್‌ಏಜೆಂಟರು, ಕೆಲಯುವಕರು, ಗೃಹರಕ್ಷಕ ದಳದವರೊಂದಿಗೆ ಸಹಕರಿಸಿ, ಟ್ರಾಫಿಕ್‌ ಜಂಜಾಟವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಮುಖ್ಯಾಧಿಕಾರಿ ಮಾಲಿನಿ ಮತ್ತಿತರರು ವಿಟ್ಲ ಬಸ್‌ ನಿಲ್ದಾಣದ ಡಾಮರು ಕಾಮಗಾರಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next