Advertisement

ವಿಟ್ಲ: ಮುಖ್ಯ ರಸ್ತೆಯಲ್ಲೇ ತರಕಾರಿ, ಸೊಪ್ಪು, ಹಣ್ಣು ವ್ಯಾಪಾರ; ಸಂಚಾರ

02:18 PM May 20, 2018 | Team Udayavani |

ವಿಟ್ಲ : ವಿಟ್ಲ ಪುತ್ತೂರು ರಸ್ತೆ ಬದಿಯಲ್ಲಿ ರವಿವಾರ ತರಕಾರಿ, ಸೊಪ್ಪು, ಹಣ್ಣು ವ್ಯಾಪಾರ ಜೋರು. ರಸ್ತೆ ಬದಿಯಲ್ಲೇ ಸೊಪ್ಪು, ತರಕಾರಿಗಳನ್ನು ಹಾಕಿ ವ್ಯಾಪಾರ ಮಾಡುತ್ತಿದ್ದರೆ, ಹಣ್ಣು ವ್ಯಾಪಾರದ ವಾಹನಗಳನ್ನು ನಿಲ್ಲಿಸಿ ವ್ಯಾಪಾರ ಮಾಡಲಾಗುತ್ತಿದೆ. ಇದರ ವಿರುದ್ಧ ಪಾದಚಾರಿಗಳು ಹಾಗೂ ಇತರ ವ್ಯಾಪಾರಿಗಳು ದೂರುತ್ತಾರೆ.

Advertisement

ವಿಟ್ಲ ಪುತ್ತೂರು ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ಸ್ಥಳಾಂತರಗೊಳ್ಳದೇ ಆಗಾಗ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಜತೆಗೆ ಇಂತಹ ರಸ್ತೆ ಬದಿಯ ವ್ಯಾಪಾರವೂ ಸಂಚಾರ ಅವ್ಯವಸ್ಥೆಗೆ ಕಾರಣವಾಗುತ್ತದೆ. ಮಂಗಳವಾರ ಸಂತೆಯ ದಿನ ವಿಟ್ಲ ಹಳೆ ಬಸ್‌ ನಿಲ್ದಾಣದಿಂದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲಾಗುತ್ತದೆ. ರವಿವಾರ ಕೆಲವು ಅಂಗಡಿಗಳು ತೆರೆದಿರುವುದಿಲ್ಲ, ಆ ಅಂಗಡಿಗಳ ಮುಂದೆ ಈ ತರಕಾರಿ ಮತ್ತು ಹಣ್ಣು ವ್ಯಾಪಾರ ಆರಂಭಿಸಲಾಗುತ್ತದೆ. ರವಿವಾರವಾಗಿರುವುದರಿಂದ ಈ ಬಗ್ಗೆ ಪಟ್ಟಣ ಪಂಚಾಯತ್‌ ಅಧಿಕಾರಿಗಳ ಗಮನಕ್ಕೆ ಬಂದಿರುವುದಿಲ್ಲ ಎನ್ನಲಾಗುತ್ತಿದೆ. ಸಾರ್ವಜನಿಕರಿಗೆ ಅಡ್ಡಿಪಡಿಸುತ್ತಿರುವ ಈ ಬಗ್ಗೆ ತತ್‌ಕ್ಷಣ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next