Advertisement

ಕಾಮಗಾರಿಗಳ ಉದ್ಘಾಟನೆ, ಶೌಚಾಲಯಕ್ಕೆ ಶಂಕು

03:11 PM Oct 07, 2018 | |

ವಿಟ್ಲ: ವಿಟ್ಲ ಪ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು.

Advertisement

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಪ.ಪಂ. ಅಧ್ಯಕ್ಷ ಅರುಣ ಎಂ. ವಿಟ್ಲ, ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ. ಚಂದ್ರಕಾಂತಿ ಶೆಟ್ಟಿ, ಪ.ಪಂ. ಸದಸ್ಯರಾದ ಶ್ರೀಕೃಷ್ಣ ವಿಟ್ಲ, ವಿ. ರಾಮದಾಸ ಶೆಣೈ, ಉಷಾ ಕೃಷ್ಣಪ್ಪ ಕೆ., ಲೋಕನಾಥ ಶೆಟ್ಟಿ ಕೊಲ್ಯ, ಮಂಜುನಾಥ ಕಲ್ಲಕಟ್ಟ, ಇಂದಿರಾ ಅಡ್ಡಾಳಿ, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ್‌ ಉಕ್ಕುಡ, ಕಾರ್ಯದರ್ಶಿ ಉದಯ ಆಲಂಗಾರು, ಜಗದೀಶ್‌ ಪಾಣೆಮಜಲು ಮತ್ತಿತರರು ಉಪಸ್ಥಿತರಿದ್ದರು.

ಉದ್ಘಾಟನೆ
ವಿಟ್ಲ ಪ.ಪಂ.ಗೆ 2015-16ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಹಣಕಾಸು ಹಂಚಿಕೆ ಅನುದಾನದಡಿ ಮಂಜೂರಾದ 4 ಲಕ್ಷ ರೂ. ವೆಚ್ಚದ ವಿಟ್ಲ ಪ.ಪಂ. ವ್ಯಾಪ್ತಿಯ ನೆಲ್ಲಿಗುಡ್ಡೆ ಪಳೇರಿ ರಸ್ತೆ ಅಭಿವೃದ್ಧಿ, 4.18 ಲಕ್ಷ ರೂ. ವೆಚ್ಚದ ಪಳಿಕೆ ಜನತಾ ಕಾಲನಿ, ಚಂದಳಿಕೆ ಜನತಾ ಕಾಲನಿಯಲ್ಲಿ ರಸ್ತೆ ಅಭಿವೃದ್ಧಿ, 1 ಲಕ್ಷ ರೂ. ವೆಚ್ಚದ ಉಕ್ಕುಡ ಬುಳೇರಿಕಟ್ಟೆಯಲ್ಲಿ ಹೈಮಾಸ್ಟ್‌ ಬೀದಿದೀಪ, 2017-18ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಹಣಕಾಸು ಉಳಿಕೆ ಅನುದಾನ ದಡಿ ಮಂಜೂರಾದ 5 ಲಕ್ಷ ರೂ. ವೆಚ್ಚದ ಮಾಮೇಶ್ವರ ಮತ್ತು ನೆಲ್ಲಿಗುಡ್ಡೆ ರಸ್ತೆ ಅಭಿವೃದ್ಧಿ, 2017-18ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ 3.10 ಲಕ್ಷ ರೂ. ವೆಚ್ಚದ 5ನೇ ವಾರ್ಡ್‌ನ ಪುಚ್ಚೆಗುತ್ತು ಕೆರೆ ಬಳಿ ರಸ್ತೆ ಅಭಿವೃದ್ಧಿ ಮುಂದುವರಿದ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ಶಂಕುಸ್ಥಾಪನೆ 
ವಿಟ್ಲ ಪ.ಪಂ.ಗೆ 2017-18ನೇ ಸಾಲಿನ 14ನೇ ಹಣಕಾಸು ಯೋಜನೆ ಸಾಮಾನ್ಯ ಮೂಲ ಅನುದಾನದಡಿ ಮಂಜೂರಾದ 5.58 ಲಕ್ಷ ರೂ. ವೆಚ್ಚದ ಸಾರ್ವಜನಿಕ ಶೌಚಾಲಯಕ್ಕೆ ಮೇಗಿನಪೇಟೆಯಲ್ಲಿ ಶಂಕುಸ್ಥಾಪನೆ ಮಾಡಲಾಯಿತು. 5 ಲಕ್ಷ ರೂ. ವೆಚ್ಚದ ಮಾಮೇಶ್ವರ ಮತ್ತು ನೆಲ್ಲಿಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next