ಭೀಮಾ ಹಾಗೂ ಭರಣೀ ನದಿಯ ಸಂಗಮನದಲ್ಲಿ ಉತ್ತರದ್ವಾರವಿದೆ. ಈ ಊರಿನಲ್ಲಿ ಅನೇಕ ದೇವಾಲಯಗಳೂ ಇವೆ.
Advertisement
ಊರಿನ ಮಧ್ಯೆ ಇರುವ ವಿಠಲ ಮಂದಿರದ ಮಹಾದ್ವಾರ ಪೂರ್ವಾಭಿಮುಖವಾಗಿದೆ. ಈ ದ್ವಾರಕ್ಕೆ ನಾಮದೇವ ದ್ವಾರವೆಂದೂ ಹೇಳಲಾಗುತ್ತದೆ. ಇಲ್ಲಿ ನಾಮದೇವನ ಸಮಾಧಿ ಸ್ಥಳವಿದೆ. ನಾಮದೇವನ ಪಾದಗಳೂ ಇಲ್ಲಿವೆ. ಸಮಾಧಿಯ ಹತ್ತಿರ ಒಂದು ವಟವೃಕ್ಷ, ಅದರ ಪಕ್ಕದಲ್ಲಿ ಮೂವತ್ತಮೂರು ಕೋಟಿ ದೇವತೆಗಳ ಮಂದಿರ, ಮುಕ್ತಿಮಂಟಪವನ್ನು ಒಳಗೊಂಡಿದೆ. ಇದೊಂದು ದೊಡ್ಡ ಮಂಟಪವಾಗಿದ್ದು, ಕಮಾನುಗಳಿಂದ ಆಕರ್ಷಕವಾಗಿವೆ, ಮಂಟಪದ ಹತ್ತಿರ ಗಣಪತಿ ವಿಗ್ರಹವೂವಿದೆ. ಪ್ರಾಚೀನ ಕಾಲದಲ್ಲಿ ವಿಠ್ಠಲನ ಮೂರ್ತಿ ಇಲ್ಲಿತ್ತು ಎನ್ನಲಾಗುತ್ತದೆ. ಸ್ವಲ್ಪ ದೂರದಲ್ಲಿ ಕಲ್ಲು ಹಾಸಿಗೆಯ ಮಂಟಪ, ಪಕ್ಕದಲ್ಲೇ ಸಂತ ಪ್ರಹ್ಲಾದಬುವಾ ಬಡವೆ, ಭೀಮಾನದಿ ದಡದಲ್ಲಿ ನಿಂತ ವಿಠೊಭ ಕಾನೋಬಾ ಅವರ ಸಮಾಧಿಗಳು, ಇವುಗಳ ಸಮೀಪದಲ್ಲೇ ಸಂತರಾಮದಾಸರು ಸ್ಥಾಪಿಸಿದ ಮಾರುತಿಯ ಮೂರ್ತಿಯಿದೆ.
ಮನೋಜ್ಞವಾಗಿದೆ. 16 ಕಂಬದ ಮಂಟಪವನ್ನು ದಾಟಿದ ಕೂಡಲೇ ಅಂಬಾಬಾಯಿ, ನಾರದ, ಪರಶುರಾಮ, ಬಲಸೊಂಡೆ, ಎಡಸೊಂಡೆಯ ಗಣಪತಿ, ವೆಂಕಟೇಶವನ ಮಂದಿರಗಳಿವೆ.
Related Articles
Advertisement
ಇಲ್ಲಿಂದ 16 ಕಂಬದ ಮಂಟಪಕ್ಕೆ ಹೋಗಲು ಒಂದು ಪ್ರತ್ಯೇಕ ದ್ವಾರವಿದೆ. ಇಲ್ಲಿಯೇ 84 ಲಕ್ಷ ಯೋನಿಗಳಿಂದ ಮುಕ್ತಗೊಳಿಸುವ ಪ್ರಸಿದ್ಧ ಶಿಲಾಲೇಖವಿದೆ. ಜನರ ಹಸ್ತ ಸ್ಪರ್ಶನದಿಂದ ಕಲ್ಲುಸವೆದು ನುಣಪಾಗಿದೆ, ಶಾಸನಸ್ಥ ವಿಷಯ ಅಳಿಸಿ ಹೋಗಿವೆ. ವಿಠೊಭ ಹಾಗೂ ರುಕ್ಮಿಣೀ ಮಂದಿರಗಳಲ್ಲಿ ನವರಾತ್ರಿ, ದೀಪಾವಳಿ, ಯುಗಾದಿಯ ಹಬ್ಬಗಳಲ್ಲಿ ವಿಶೇಷ ಆಭರಣಗಳ ಅಲಂಕಾರವೂ ನಡೆಯುತ್ತವೆ.
ಇದರೊಂದಿಗೆ ಪುಂಡಲೀಕ ಮಂದಿರ, ವಿಷ್ಣು ಪದ ಮಂದಿರ, ಗೋಪಾಲಪುರ, ಪದ್ಮತೀರ್ಥ, ದಿಂಡೀರವನ, ವ್ಯಾಸನಾರಾಯಣ ಮಂದಿರ, ಕುಂಡಲತೀರ್ಥವನ್ನೂ ಕಾಣಬಹದು. ಪಂಢರಪುರದ ತೀರ್ಥಯಾತ್ರೆಯನ್ನು ವಾರಕಾರಿ ಎಂಬ ಭಕ್ತ ಜನಾಂಗ ಮಾಡಿಸುತ್ತದೆ. ಆಷಾಢ, ಕಾರ್ತಿಕ ಮಾಸದಲ್ಲಿ ಇದು ನಡೆಯುತ್ತದೆ.