Advertisement

Vishwakarma ಯೋಜನೆಗೆ 70 ಸಚಿವರಿಂದ 70 ಸ್ಥಳಗಳಲ್ಲಿ ಚಾಲನೆ

09:11 PM Sep 11, 2023 | Team Udayavani |

ನವದೆಹಲಿ: ಅಕ್ಕಸಾಲಿಗರು, ಕಮ್ಮಾರರು, ಬಡಗಿಗಳು, ಶಿಲ್ಪಕಲಾ ಕ್ಷೇತ್ರದವರು ಸೇರಿದಂತೆ ಹಲವು ಕ್ಷೇತ್ರದ ಕರಕುಶಲಗಾರರಿಗೆ ಅನುಕೂಲ ಕಲ್ಪಿಸಲು ಘೋಷಿಸಲಾಗಿರುವ “ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ’ಗೆ ಸೆ.17ರಂದು ಚಾಲನೆ ಸಿಗಲಿದೆ.

Advertisement

ವಿಶ್ವಕರ್ಮ ದಿನದಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ಆಗಿ ಈ ಯೋಜನೆ ಉದ್ಘಾಟಿಸಲಿದ್ದಾರೆ. ಜತೆಗೆ ದೇಶದ 70 ಪ್ರಮುಖ ಸ್ಥಳಗಳಲ್ಲಿ ಕೇಂದ್ರದ 70 ಸಚಿವರು ಯೋಜನೆಗೆ ಚಾಲನೆ ನೀಡಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಹಮದಾಬಾದ್‌ನಲ್ಲಿ, ಲಕ್ನೋದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ನಾಗ್ಪುರದಲ್ಲಿ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ತಿರುವನಂತಪುರದಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಯೋಜನೆಯ ಬಗ್ಗೆ ಪ್ರಧಾನಿ ಮೋದಿಯವರು ಸ್ವಾತಂತ್ರ್ಯ ದಿನ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next