Advertisement

ವಿಶ್ವ ಬಂಟರ ಸಮ್ಮಿಲನ: ಆಮಂತ್ರಣ ಬಿಡುಗಡೆ

05:34 PM Aug 28, 2018 | Team Udayavani |

ಮುಂಬಯಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಹಾಗೂ ಸಮಸ್ತ ಬಂಟರ ಸಂಘಗಳು ಉಡುಪಿ ಜಿಲ್ಲಾ ಇವರ ಕೂಡುವಿಕೆಯೊಂದಿಗೆ ಆ. 9 ರಂದು ಉಡುಪಿಯಲ್ಲಿ ಜರಗಲಿರುವ ವಿಶ್ವ ಬಂಟರ ಸಮ್ಮಿಲನ -2018 ಭಾಗ -2 ರ ಆಮಂತ್ರಣ ಪತ್ರಿಕೆಯನ್ನು ಎಂಆರ್‌ಜಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ  ಕೆ. ಪ್ರಕಾಶ್‌ ಶೆಟ್ಟಿಯವರು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ  ನಡೆಸಿಕೊಟ್ಟರು.

Advertisement

ಈ ಸಮಾರಂಭದಲ್ಲಿ ಒಕ್ಕೂಟದ ಕಾರ್ಯದರ್ಶಿ ವಿಜಯ ಪ್ರಸಾದ್‌ ಆಳ್ವ, ಸಮ್ಮಿಲನದ ಕೋಶಾಧಿಕಾರಿ ಮೋಹನ್‌ದಾಸ್‌ ಶೆಟ್ಟಿ ಉಳೂರು, ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷ  ಉಪೇಂದ್ರ ಆರ್‌. ಶೆಟ್ಟಿ,  ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕರ್ನೂರು ಮೋಹನ್‌ ರೈ ಹಾಗೂ ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು ಉಪಸ್ಥಿತರಿದ್ದು ಸಮ್ಮಿಲನದ ಯಶಸ್ಸಿಗೆ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next