Advertisement

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌: ಸ್ವಯಂ ಪ್ರೇರಿತ ರಕ್ತದಾನ ಶಿಬಿರ

01:05 PM Oct 05, 2024 | Team Udayavani |

ಮಸ್ಕತ್‌: ಮಸ್ಕತ್‌ನ ಸೆಂಟ್ರಲ್‌ ಬ್ಲಿಡ್‌ಬ್ಯಾಂಕ್‌ನಲ್ಲಿ ಸೆ.20ರಂದು ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರಗಿತು. ಪೆರ್ಡೂರ್‌ ಡಾ| ರಾಜೇಶ್‌ ಆಚಾರ್ಯ ಅವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

Advertisement

ಇಸ್ಸಾಕೋ ಗ್ರೂಪ್‌ನ ಲೀಮಾ, ಒಮಾನ್‌ ತುಳುವೆರ್‌ ತಂಡದ ರಮಾನಂದ ಶೆಟ್ಟಿ, ಒಮಾನ್‌ ಬಿಲ್ಲವಾಸ್‌ ಅಧ್ಯಕ್ಷ ಸುಜಿತ್‌ ಅಂಚನ್‌, ಮಸ್ಕತ್‌ ಮೊಗವೀರ ಕೂಟದ ಅಧ್ಯಕ್ಷ ಪದ್ಮಾಕರ್‌ ಮೆಂಡನ್‌, ಕನ್ನಡ ಸಂಘದ ಹಿತೇಶ್‌ ಮಂಗಳೂರು, ಬಿರುವ ಜವನೆರ್‌ ಗ್ರೂಪ್‌ನ ಗುರುಪ್ರಸಾದ್‌, ಶಿವಾನಂದ ಕೋಟ್ಯಾನ್‌ ಮೊದಲಾದವರು ಪಾಲ್ಗೊಂಡಿದ್ದರು.

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್‌(ವಿಒಎಂ)ನ ಸ್ಥಾಪಕ ಸದಸ್ಯ ಸೀತಾರಾಮ ಆಚಾರ್ಯ, ಅಧ್ಯಕ್ಷ ರವೀಂದ್ರ ಆಚಾರ್ಯ ಕಳತ್ತೂರು, ಸಂಘಟನ ಸಮಿತಿಯ ಸದಸ್ಯರು, ಸ್ವಯಂಸೇವಕರು, ಮಹಿಳಾ ಸದಸ್ಯರು ಸಹಕರಿಸಿದರು. 70ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next