Advertisement

ನಮ್ಮನ್ನು ಸಂಪರ್ಕಿಸದೆ ಧೋನಿಯ ನಿರ್ಣಯ: ಸೆಹ್ವಾಗ್‌ ಸಿಡಿಮಿಡಿ

01:38 PM Feb 02, 2020 | keerthan |

ನವದೆಹಲಿ: “ಭಾರತ ಮಾಜಿ ನಾಯಕ ಎಂ.ಎಸ್‌.ಧೋನಿ ಯಾವುದೇ ಮಾಹಿತಿ ನೀಡದೆ ನಾವೆಲ್ಲ ನಿಧಾನ ಗತಿಯ ಫೀಲ್ಡರ್‌ಗಳೆಂದು ಅವರಾಗಿಯೇ ತೀರ್ಮಾನ ತೆಗೆದು ಕೊಂಡಿದ್ದರು, ಮಾಧ್ಯಮಗಳೆದುರು ಹೇಳಿಕೆಯನ್ನೂ ನೀಡಿದ್ದರು’ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಹೇಳಿದ್ದಾರೆ.

Advertisement

ಭಾರತ ತಂಡದ ಆಡಳಿತ ಮಂಡಳಿ ಆಟಗಾರರೊಂದಿಗೆ ಸರಿಯಾದ ರೀತಿಯಲ್ಲಿ ಸಂವಹನಡೆಸುವುದಿಲ್ಲ ಎನ್ನುವ ವಿಷಯದ ಬಗ್ಗೆ ಮಾತನಾಡಿದ ಅವರು, “2012ರಲ್ಲಿ ನಾನು, ಸಚಿನ್‌ ತೆಂಡುಲ್ಕರ್‌ ಹಾಗೂ ಗೌತಮ್‌ ಗಂಭೀರ್‌ ಬಗ್ಗೆ ತಂಡದ ಸಭೆಯಲ್ಲಿ ಎಲ್ಲಿಯೂ ನಾವೆಲ್ಲ ನಿಧಾನಗತಿ ಫೀಲ್ಡರ್ ಅಂತ ಧೋನಿ ಒಂದು ದಿನವೂ ಹೇಳಿಲ್ಲ. ಆದರೆ ಮಾಧ್ಯಮಗಳ ಎದುರು ಮಾತ್ರ ಹೇಳಿದ್ದರು’ ಎಂದು ಸಿಡಿಮಿಡಿಯಾದರು.

ಸದ್ಯ ರಿಷಭ್ ಪಂತ್ ವಿಚಾರದಲ್ಲಿ ಕೊಹ್ಲಿ ಮತ್ತು ಟೀಂ ಮ್ಯಾನೇಜ್ ಮೆಂಟ್ ಅದೇ ರೀತಿ ಮಾತನಾಡಿದ ಸೆಹ್ವಾಗ್, ರಿಷಭ್ ಪಂತ್ ಮ್ಯಾಚ್ ವಿನ್ನಿಂಗ್ ಆಟಗಾರ ಎಂದ ಮೇಲೆ ಆತನನ್ನು ಹೊರಗಿಟ್ಟಿರುವುದಾದರೂ ಯಾಕೆ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next